ಹುಬ್ಬಳ್ಳಿ: ‘ಮುಂದಿನ ಸಿಎಂ ಜಿ.ಪರಮೇಶ್ವರ್..’ ಎಂದು ಕಾಂಗ್ರೆಸ್ ಕಾರ್ಯಕರ್ತರೊಬ್ಬರು ಘೋಷಣೆ ಕೂಗಿದ ಘಟನೆಯು ಇಲ್ಲಿನ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ನಡೆಯಿತು.
ಗೃಹ ಸಚಿವ ಜಿ.ಪರಮೇಶ್ವರ್ ಅವರು ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ವೇಳೆ, ಮೊದಲಿಗೆ ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಜಯವಾಗಲಿ... ಸಚಿವ ಪರಮೇಶ್ವರ್ ಅವರಿಗೆ ಜಯವಾಗಲಿ.. ಎಂದು ಘೋಷಣೆ ಕೂಗಿದರು. ಈ ಮಧ್ಯೆ ಕಾರ್ಯಕರ್ತರೊಬ್ಬರು, ‘ಮುಂದಿನ ಸಿಎಂ ಪರಮೇಶ್ವರ್ ಅವರಿಗೆ... ಎಂದು ಘೋಷಣೆ ಕೂಗಿದರು. ಆಗ ಸಚಿವ ಪರಮೇಶ್ವರ್, ‘ಸುಮ್ಮನಿರಿ, ಮಾಧ್ಯಮದವರು ಇದ್ದಾರೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.