ಹುಬ್ಬಳ್ಳಿ: ಹುಬ್ಬಳ್ಳಿಯಿಂದ ದೇಶದ ಪ್ರಮುಖ ನಗರಗಳಿಗೆ ವಿಮಾನಯಾನ ಸೌಲಭ್ಯ ಕಲ್ಪಿಸಬೇಕೆಂದು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯಿಂದ (ಕೆಸಿಸಿಐ) ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರಿಗೆ ಶನಿವಾರ ಮನವಿ ಸಲ್ಲಿಸಲಾಯಿತು.
ಮುಂಬೈ, ಜೋಧಪುರ, ಅಹಮದಾಬಾದ್, ಕೊಚ್ಚಿ, ಸೂರತ್, ಗೋವಾ, ಬೆಂಗಳೂರು, ತಿರುಪತಿಗೆ ಹೋಗುವ ವಿಮಾನಗಳನ್ನು ಪುನರಾರಂಭಿಸಬೇಕು. ಸ್ಟಾರ್ ಏರ್ ವಿಮಾನಗಳ ಸೇವೆ ಕೊನೆ ಕ್ಷಣದಲ್ಲಿ ರದ್ದಾಗುವುದರಿಂದ ಆಗುತ್ತಿರುವ ತೊಂದರೆ ನಿವಾರಿಸಬೇಕು ಎಂದು ಮುಖಂಡರು ಮನವಿ ಮಾಡಿದರು.
ಹುಬ್ಬಳ್ಳಿ–ಅಂಕೋಲಾ, ಹುಬ್ಬಳ್ಳಿ ಬೆಳಗಾವಿ (ಕಿತ್ತೂರು ಮಾರ್ಗದಿಂದ) ರೈಲ್ವೆ ಯೋಜನೆಗಳನ್ನು ತ್ವರಿತವಾಗಿ ಅನುಷ್ಠಾನಗೊಸಳಿಸಬೇಕು, ಲೋಂಡಾ ಕಡೆಗೆ ಹೆಚ್ಚುವರಿ ಫುಟ್ ಓವರ್ ಬ್ರಿಡ್ಜ್ (ಎಫ್ಒಬಿ) ನಿರ್ಮಿಸಬೇಕು. ಬಡವರಿಗೆ ಅಕ್ಕಿ ವಿತರಣೆ ಸಮರ್ಪಕವಾಗಿ ನಡೆಯಬೇಕು. ನವೀಕರಿಸಬಹುದಾದ ಇಂಧನಕ್ಕೆ ಸಂಬಂಧಿಸಿದ ಹೆಚ್ಚಿನ ಯೋಜನೆಗಳನ್ನು ಈ ಭಾಗದಲ್ಲಿ ಅನುಷ್ಠಾನಗೊಳಿಸಬೇಕು ಎಂದು ತಿಳಿಸಿದರು.
ಸಂಸ್ಥೆಯ ಅಧ್ಯಕ್ಷ ಎಸ್. ಸಂಶಿಮಠ, ಉಪಾಧ್ಯಕ್ಷ ಸಂದೀಪ ಬಿಡಸಾರಿಯಾ, ಗೌರವ ಕಾರ್ಯದರ್ಶಿಗಳಾದ ರವೀಂದ್ರ ಎಸ್. ಬಳಿಗಾರ, ಮಹೇಂದ್ರ ಸಿಂಘಿ, ಸದಸ್ಯ ಚನ್ನು ಹೊಸಮನಿ, ಎಂ.ಸಿ. ಹಿರೇಮಠ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.