ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡದಲ್ಲಿ ಸೋಮವಾರ ನಸುಕಿನಿಂದ ಗುಡುಗು, ಮಿಂಚು ಸಹಿತ ಮಳೆಯಾಗುತ್ತಿದೆ. ವಾತಾವರಣ ತಂಪಾಗಿಸಿದೆ. ರಾತ್ರಿಯಿಂದ ಮೋಡ ಕವಿದ ವಾತಾವರಣ ಇತ್ತು.
ವಾಯು ವಿಹಾರ, ಹಾಲು ತರಲು ಹೊರಟವರು ಕೈಯಲ್ಲಿ ಛತ್ರಿ ಹಿಡಿದು ಮತ್ತು ರೇನ್ ಕೋಟ್ ಧರಿಸಿ ಸಾಗಿದರು.
'ಬಿಸಿಲು ತಾಗದಿರಲಿ ಎಂದು ಛತ್ರಿ ಹಿಡಿದು, ಓಡಾಡುತ್ತಿದ್ದೆವು. ಈಗ ಅದೇ ಛತ್ರಿ ಮಳೆ ಸಂದರ್ಭದಲ್ಲೂ ಬಳಕೆ ಆಗುತ್ತಿದೆ. ಸುಡು ಬಿಸಿಲು ಆಯಾಸಗೊಳಿಸಿತ್ತು. ಮಳೆಯು ವಾತಾವರಣ ಹಿತಕರಗೊಳಿಸಿದೆ' ಎಂದು ಹಿರಿಯರಾದ ಶ್ರೀನಿವಾಸಯ್ಯ ತಿಳಿಸಿದರು.
'ಇದೇ ರೀತಿ ಮಳೆ ಸುರಿದರೆ, ನೀರಿನ ಸಮಸ್ಯೆ ಬಗೆಹರಿಯುತ್ತದೆ. ಕೃಷಿ ಚಟುವಟಿಕೆಯು ನಿರಾತಂಕವಾಗಿ ನಡೆಯುತ್ತದೆ' ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.