ಹುಬ್ಬಳ್ಳಿ: ನಗರದ ಪಿ.ಬಿ.ರಸ್ತೆಯ ದೇಸಾಯಿ ಓಣಿಯ ಶ್ರೀದೇವಿ ನಲ್ಲನಮ್ಮ ಕಲ್ಯಾಣ ಸೇವಾ ಸಂಘ ಪಂಚ ಕಮಿಟಿಯಿಂದ ದಸರಾ ಉತ್ಸವ ಆಚರಿಸಲಾಗುತ್ತಿದೆ.
ಅ.3ರಂದು ಮಧ್ಯಾಹ್ನ 3.45ಕ್ಕೆ ನಲ್ಲನಮ್ಮ ದೇವಿಗೆ ಮಹಾಅಭಿಷೇಕ ಹಾಗೂ ಘಟಸ್ಥಾಪನೆ ನೆರವೇರಲಿದೆ. ಅ.8ರಂದು ಸಂಜೆ 5ಕ್ಕೆ ಕುಂಕುಮಾರ್ಚನೆ ಕಾರ್ಯಕ್ರಮ, ಅ.10 ರಂದು ಮಧ್ಯರಾತ್ರಿ 12ಕ್ಕೆ ಅಷ್ಟಮಿ ಬಲಿಪಾಡ್ಯ, ಅ.11ರಂದು ರಾತ್ರಿ 12ಕ್ಕೆ ಮಹಾನವಮಿ ಖಂಡೆಪೂಜೆ, ಮಹಾಮಂಗಳಾರತಿ, ಆನಂತರ ದೇವಸ್ಥಾನದಲ್ಲಿ ಅನ್ನಸಂತರ್ಪಣೆ. ಅ.12ರಂದು ವಿಜಯದಶಮಿ ನಿಮಿತ್ತ ಬನ್ನಿ ಮುಡಿಯುವ ಕಾರ್ಯಕ್ರಮ, ಪಲ್ಲಕ್ಕಿ ಉತ್ಸವ ನೆರವೇರಲಿದೆ ಎಂದು ಕಮಿಟಿಯ ಪ್ರಧಾನ ಗೌರವ ಕಾರ್ಯದರ್ಶಿ ವೆಂಕಟೇಶ ಬಳ್ಳಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗ್ರಾಮದೇವಿ ದೇವಸ್ಥಾನ: ಹುಬ್ಬಳ್ಳಿಯ ಯಲ್ಲಾಪುರ ಓಣಿಯ ಗ್ರಾಮದೇವಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ನಿಮಿತ್ತ ಪ್ರತಿದಿನ ಸಂಜೆ 5 ಗಂಟೆಗೆ ಭಜನೆ, ರಾತ್ರಿ 7 ಗಂಟೆಗೆ ಪ್ರವಚನ, ರಾತ್ರಿ 9ಕ್ಕೆ ಮಹಾಮಂಗಳಾರತಿ ಮತ್ತು ರಾತ್ರಿ 9.30ಕ್ಕೆ ಮಹಾಪ್ರಸಾದ ಹಾಗೂ ದಾಂಡಿಯಾ ಕಾರ್ಯಕ್ರಮ ನಡೆಯುತ್ತವೆ.
ನವನಗರ ಕಾಶಿ ಶಾಖಾಮಠದ ರಾಜಶೇಖರ ಶಿವಾಚಾರ್ಯ ಸ್ವಾಮೀಜಿ ಪ್ರವಚನದ ಸಾನ್ನಿಧ್ಯ ವಹಿಸುವರು.
ಬನಶಂಕರಿ ದೇವಸ್ಥಾನ: ಇಲ್ಲಿನ ವಿದ್ಯಾನಗರ ಬನಶಂಕರಿ ಬಡಾವಣೆಯ ಬನಶಂಕರಿ ದೇವಸ್ಥಾನದಲ್ಲಿ ಅ.3ರಿಂದ ಅ.12ರವರೆಗೂ ದಸರಾ ಮಹೋತ್ಸವ ನಡೆಯಲಿದೆ.
ಅ.3ರಂದು ಬೆಳಿಗ್ಗೆ 8 ಗಂಟೆಗೆ ಘಟಸ್ಥಾಪನೆ. ಪ್ರತಿದಿನ ರಾತ್ರಿ 7ರಿಂದ 8ರವರೆಗೂ ಶ್ರೀದೇವಿ ಪುರಾಣ ಪ್ರವಚನ. ಹುಬ್ಬಳ್ಳಿಯ ಧೂಳಖೇಡ ನಾರಾಯಣಾಚಾರ್ಯ ಅವರು ಪ್ರವಚನ ನೀಡುವರು. ಅ.11ರಂದು ಬೆಳಿಗ್ಗೆ 9ಕ್ಕೆ ಚಂಡಿ ಹೋಮಕಾರ್ಯ, ಮಧ್ಯಾಹ್ನ 12ಕ್ಕೆ ಪೂರ್ಣಾಹುತಿ. ಅ.12ರಂದು ಸಂಜೆ 5.30ಕ್ಕೆ ಬನ್ನಿ ಮುಡಿಯುವ ಕಾರ್ಯಕ್ರಮ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.