ADVERTISEMENT

ಆಕಾಂಕ್ಷಾಗೆ ನಾಟ್ಯ ಮಯೂರಿ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2024, 14:50 IST
Last Updated 14 ಮಾರ್ಚ್ 2024, 14:50 IST
‘ಕರ್ನಾಟಕ ನಾಟ್ಯ ಮಯೂರಿ–2024’ ಪ್ರಶಸ್ತಿ ಪತ್ರ, ಫಲಕದೊಂದಿಗೆ ಹುಬ್ಬಳ್ಳಿಯ ಉಣಕಲ್‌ ಗ್ರಾಮದ ಬಾಲಕಿ ಆಕಾಂಕ್ಷಾ ಮಾಲತೇಶ ಗೌಡ ಪಾಟೀಲ ಹಾಗೂ ಪೋಷಕರು
‘ಕರ್ನಾಟಕ ನಾಟ್ಯ ಮಯೂರಿ–2024’ ಪ್ರಶಸ್ತಿ ಪತ್ರ, ಫಲಕದೊಂದಿಗೆ ಹುಬ್ಬಳ್ಳಿಯ ಉಣಕಲ್‌ ಗ್ರಾಮದ ಬಾಲಕಿ ಆಕಾಂಕ್ಷಾ ಮಾಲತೇಶ ಗೌಡ ಪಾಟೀಲ ಹಾಗೂ ಪೋಷಕರು   

ಹುಬ್ಬಳ್ಳಿ: ಇಲ್ಲಿನ ಉಣಕಲ್‌ ಗ್ರಾಮದ ಬಾಲಕಿ ಆಕಾಂಕ್ಷಾ ಮಾಲತೇಶ ಗೌಡ ಪಾಟೀಲ, ’ಕರ್ನಾಟಕ ನಾಟ್ಯ ಮಯೂರಿ–2024’ ಪ್ರಶಸ್ತಿ ಗೌರವಕ್ಕೆ ಪಾತ್ರರಾಗಿದ್ದಾರೆ. 

ಬೆಳಗಾವಿಯಲ್ಲಿ ಈಚೆಗೆ ನಡೆದ ‘ರಾಷ್ಟ್ರೀಯ ನೃತ್ಯೋತ್ಸವ’ದಲ್ಲಿ ಭಾಗವಹಿಸಿ ಮೂರನೇ ಸ್ಥಾನ ಪಡೆದಿದ್ದಾಳೆ. ನಗರದ ರಾಯಾಪುರದ ಕೆಎಲ್‌ಇ ಶಾಲೆಯ ಮೂರನೇ ತರಗತಿಯ ವಿದ್ಯಾರ್ಥಿನಿಯಾದ ಆಕಾಂಕ್ಷಾಳಿಗೆ ತಂದೆ ಮಾಲತೇಶ ಪಾಟೀಲ, ತಾಯಿ ಸುಜಾತಾ ಪಾಟೀಲ, ನೃತ್ಯ ಗುರು ನವನಗರದ ಶಾಂತಲಾ ನೃತ್ಯಾಲಯದ ವಿಜೇತಾ ವರ್ಣೇಕರ ಮಾರ್ಗದರ್ಶನ ನೀಡಿದ್ದಾರೆ. 

ಪಾಲಿಕೆಯ ಸದಸ್ಯ ರಾಜಣ್ಣ ಕೊರವಿ ಹಾಗೂ ಉಣಕಲ್ ಗ್ರಾಮದ ಗಣ್ಯರು, ವಿದ್ಯಾರ್ಥಿನಿಯನ್ನು ಅಭಿನಂದಿಸಿದ್ದಾರೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.