ADVERTISEMENT

ಮಳೆ: ಮನೆ ಗೋಡೆ ಕುಸಿದು ಒಬ್ಬರು ಸಾವು

​ಪ್ರಜಾವಾಣಿ ವಾರ್ತೆ
Published 26 ಜುಲೈ 2024, 20:11 IST
Last Updated 26 ಜುಲೈ 2024, 20:11 IST
ಧಾರವಾಡ ತಾಲ್ಲೂಕಿನ ವೆಂಕಟಾಪುರದಲ್ಲಿ ಮನೆ ಗೋಡೆ ಕುಸಿದಿರುವುದು
ಧಾರವಾಡ ತಾಲ್ಲೂಕಿನ ವೆಂಕಟಾಪುರದಲ್ಲಿ ಮನೆ ಗೋಡೆ ಕುಸಿದಿರುವುದು   

ಧಾರವಾಡ: ತಾಲ್ಲೂಕಿನ ವೆಂಕಟಾಪುರದಲ್ಲಿ ಮಳೆಗಾಳಿಗೆ ಗುಡಾರದ ಮೇಲೆ ಮನೆಯ ಗೋಡೆ ಕುಸಿದು ಯಲ್ಲಪ್ಪ (45) ಮೃತಪಟ್ಟಿದ್ಧಾರೆ. ಅವರ ಪತ್ನಿ ಹುನುಮವ್ವ ಮತ್ತು ಪುತ್ರಿ ಯಲ್ಲವ್ವ ಗಾಯಗೊಂಡಿದ್ದಾರೆ.

ಅವಘಡದಲ್ಲಿ ತಲೆಗೆ ತೀವ್ರ ಪೆಟ್ಟಾಗಿದ್ದ ಯಲ್ಲಪ್ಪ ಅವರು ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ಧಾರೆ. ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

‘ಮನೆಯೊಂದರ ಪಕ್ಕ ‌ಗುಡಾರದಲ್ಲಿ ಯಲ್ಲಪ್ಪ ಅವರ ಕುಟುಂಬ ಇತ್ತು. ಸತತ ಮಳೆಯಿಂದಾಗಿ ಶುಕ್ರವಾರ ರಾತ್ರಿ 9 ಗಂಟೆ ಹೊತ್ತಿನಲ್ಲಿ ಮನೆ ಗೋಡೆ ಕುಸಿದು ಅವಘಡ ಸಂಭವಿಸಿದೆ. ಈ ಕುಟುಂಬದವರು ಕೂಲಿ ಮಾಡಿ ಬದುಕು ಸಾಗಿಸುತ್ತಿದ್ದರು’ ಎಂದು ಉಪವಿಭಾಗಾಧಿಕಾರಿ ಷಾ ಅಲಂ ಹುಸೇನ್‌ ‘ಪ್ರಜಾವಾಣಿ‘ಗೆ ತಿಳಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.