ADVERTISEMENT

ಬಾಲಲೀಲ ಸಂಗಮೇಶ್ವರ ತೆಪ್ಪೋತ್ಸವ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 14 ಜನವರಿ 2024, 16:26 IST
Last Updated 14 ಜನವರಿ 2024, 16:26 IST
ನವಲಗುಂದ ತಾಲ್ಲೂಕಿನ ಶಿರೂರು ಗ್ರಾಮದ ಬಾಲಲೀಲ ಸಂಗಮೇಶ್ವರ ತೆಪ್ಪೋತ್ಸವವು ಸಾವಿರಾರು ಭಕ್ತಾದಿಗಳ ಮಧ್ಯ ಅದ್ಧೂರಿಯಾಗಿ ಜರುಗಿತು
ನವಲಗುಂದ ತಾಲ್ಲೂಕಿನ ಶಿರೂರು ಗ್ರಾಮದ ಬಾಲಲೀಲ ಸಂಗಮೇಶ್ವರ ತೆಪ್ಪೋತ್ಸವವು ಸಾವಿರಾರು ಭಕ್ತಾದಿಗಳ ಮಧ್ಯ ಅದ್ಧೂರಿಯಾಗಿ ಜರುಗಿತು   

ನವಲಗುಂದ: ತಾಲ್ಲೂಕಿನ ಶಿರೂರ ಗ್ರಾಮದಲ್ಲಿ ಮಕರ ಸಂಕ್ರಾಂತಿಯಂದು ಬಾಲಲೀಲ ಸಂಗಮೇಶ್ವರ ತೆಪ್ಪೋತ್ಸವವು ಇನಾಂಹೊಂಗಲ ವಿರಕ್ತಮಠದ ಶಿದ್ದಲಿಂಗ ಸ್ವಾಮೀಜಿ ಹಾಗೂ ಗರಗ ಗ್ರಾಮ ಕಲ್ಮಠದ ಪ್ರಶಾಂತ ದೇವರು ಅವರ ಸಾನಿಧ್ಯದಲ್ಲಿ ಹಾಗೂ ಸಾವಿರಾರು ಭಕ್ತಾದಿಗಳ ಹರ್ಷೊದ್ಘಾರಗಳ ಮಧ್ಯ ಭಾನುವಾರ ಅದ್ಧೂರಿಯಾಗಿ ನೆರವೇರಿತು.

ತೆಪ್ಪೋತ್ಸವದ ಅಂಗವಾಗಿ ಸಂಗಮೇಶ್ವರ ದೇವನಿಗೆ ವಿಶೇಷ ಅಲಂಕಾರ ಹಾಗೂ ಪೂಜೆ ಮಾಡಲಾಗಿತ್ತು. ಗ್ರಾಮದ ಸುತ್ತಮುತ್ತಲಿನ ಆಯಟ್ಟಿ, ಗುಮ್ಮಗೋಳ, ಬ್ಯಾಲ್ಯಾಳ, ಮೊರಬ, ಗರಗ, ಲೋಕೂರು, ಬೆಟಗೇರಿ, ಹಾರೋಬೇಳವಡಿ, ಇನಾಮಹೊಂಗಲ್‌, ಅಮ್ಮಿನಭಾವಿ ಸೇರಿದಂತೆ ವಿವಿಧ ಗ್ರಾಮಗಳಿಂದ ಭಕ್ತರು ತೆಪ್ಪೋತ್ಸವದಲ್ಲಿ ಭಾಗವಹಿಸಿದ್ದರು.

ನವಲಗುಂದ ತಾಲ್ಲೂಕಿನ ಶಿರೂರು ಗ್ರಾಮದ ಬಾಲಲೀಲ ಸಂಗಮೇಶ್ವರ ತೆಪ್ಪೋತ್ಸವವು ಸಾವಿರಾರು ಭಕ್ತಾದಿಗಳ ಮಧ್ಯ ಅದ್ಧೂರಿಯಾಗಿ ಜರುಗಿತು

ಬೆಳಗ್ಗೆ ಮಲಪ್ರಭಾ ಬಲದಂಡೆಯ ಕಾಲುವೆಯಲ್ಲಿ ಪವಿತ್ರ ಸ್ನಾನ ಮಾಡಿದರು. ಸಂಜೆ ನಡೆದ ಬಾಲಲೀಲಾ ಸಂಗಮೇಶ್ವರ ತೆಪೋತ್ಸವದಲ್ಲಿ ಪಾಲ್ಗೊಂಡರು. ತಾವು ತಂದಿದ್ದ ಜೋಳದ ರೊಟ್ಟಿ, ಪಲ್ಯ ಸೇರಿದಂತೆ ವಿವಿಧ ಭಕ್ಷ್ಯ ಭೋಜನಗಳನ್ನು ಸವಿದರು. ಜಾತ್ರೆಯ ನಿಮಿತ್ತ ರಾತ್ರಿ ನಾಟಕ ಪ್ರದರ್ಶನ ಇತ್ತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.