ಹುಬ್ಬಳ್ಳಿ: ‘ಸಂಸ್ಕೃತವನ್ನು ಒಂದು ಭಾಷೆಯಾಗಿ ಮಾತ್ರ ನೋಡದೆ ಅದನ್ನು ಜ್ಞಾನ ಭಂಡಾರ ಎಂದು ಪರಿಗಣಿಸಬೇಕು’ ಎಂದು ಸಂಸ್ಕೃತ ಭಾಷಾತಜ್ಞ ಸಚಿನ್ ಕಥಾಳೆ ಹೇಳಿದರು.
ಇಲ್ಲಿನ ನವನಗರದ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಲ್ಲಿ ಏರ್ಪಡಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ‘ಸಂಸ್ಕೃತದಲ್ಲಿ ವಿಜ್ಞಾನ’ ಕುರಿತು ಮಾತನಾಡಿದರು.
ಮುಖ್ಯ ಅತಿಥಿಯಾಗಿದ್ದ ಲಕ್ಷ್ಮಿನಾರಾಯಣ ಮಾತನಾಡಿದರು. ಕುಲಪತಿ ಪ್ರೊ. ಸಿ.ಬಸವರಾಜು ಅಧ್ಯಕ್ಷತೆ ವಹಿಸಿದ್ದರು. ಕುಲಸಚಿವೆ ರತ್ನಾ ಆರ್. ಭರಮಗೌಡರ, ಕಾರ್ಯಕ್ರಮದ ಸಂಯೋಜಕರಾದ ಅನು ಪ್ರಸನ್ನನ್, ರಾಜೇಂದ್ರಕುಮಾರ ಹಿಟ್ಟಣಗಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.