ADVERTISEMENT

ಶಾಲೆ ಮಕ್ಕಳಿಗೆ ಥಳಿಸಿದ್ದ ಶಿಕ್ಷಕಿ ಅಮಾನತು

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2024, 15:44 IST
Last Updated 25 ಫೆಬ್ರುವರಿ 2024, 15:44 IST
<div class="paragraphs"><p>ಶಿಕ್ಷಕಿ (ಪ್ರಾತಿನಿಧಿಕ ಚಿತ್ರ)</p></div>

ಶಿಕ್ಷಕಿ (ಪ್ರಾತಿನಿಧಿಕ ಚಿತ್ರ)

   

ಕಲಘಟಗಿ : ‘ತಾಲ್ಲೂಕಿನ ಜುಂಜನಬೈಲ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಥಳಿಸಿದ್ದ ಶಿಕ್ಷಕಿ ಸುಜಾತ ಸುಣಗಾರ ಅವರನ್ನು ಫೆ.23 ರಂದು ಶಿಕ್ಷಣ ಇಲಾಖೆ ಅಮಾನತು ಮಾಡಿ ಆದೇಶ ಹೊರಡಿಸಿದೆ’ ಎಂದು ಬಿಇಒ ಉಮಾದೇವಿ ಬಸಾಪುರ ತಿಳಿಸಿದ್ದಾರೆ.

‘ಫೆ.19 ರಂದು ಶಾಲೆ ಮಕ್ಕಳು ಮಧ್ಯಾಹ್ನದ ಬಿಸಿ ಊಟ ತಮಗೆ ತಂದು ಕೊಡದಿದ್ದಕ್ಕೆ ಮಕ್ಕಳಿಗೆ ಮನಸೋ ಇಚ್ಛೆ ಬಾಸುಂಡೆ ಮೂಡುವ ಹಾಗೆ ಥಳಿಸಿದ್ದಾರೆ’ ಎಂದು ಆರೋಪಿಸಿ ವಿದ್ಯಾರ್ಥಿಗಳು ಹಾಗೂ ಪಾಲಕರು ಶಿಕ್ಷಕಿ ವಿರುದ್ಧ ಪ್ರತಿಭಟನೆ ನಡೆಸಿದ್ದರು.

ADVERTISEMENT

ಈ ಬಗ್ಗೆ ‘ಪ್ರಜಾವಾಣಿ‘ ಯಲ್ಲಿ ಫೆ.20 ರಂದು ‘ಊಟ ತಂದು ಕೊಡದಿದ್ದಕ್ಕೆ ಮಕ್ಕಳಿಗೆ ಥಳಿತ’  ಶೀರ್ಷಿಕೆ ಅಡಿಯಲ್ಲಿ ಸುದ್ದಿ ಪ್ರಕಟವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.