ADVERTISEMENT

ಲಕ್ಷ್ಮೇಶ್ವರ | ಆಕಸ್ಮಿಕ ಬೆಂಕಿ: ಸುಟ್ಟ ಮರಗಳು

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2024, 15:11 IST
Last Updated 6 ಮಾರ್ಚ್ 2024, 15:11 IST
ಆಕಸ್ಮಿಕ ಬೆಂಕಿಗೆ ಬಲಿಯಾದ ಲಕ್ಷ್ಮೇಶ್ವರ ತಾಲ್ಲೂಕು ಅಕ್ಕಿಗುಂದ ತಾಂಡಾದ ಹಣ್ಣಿನ ತೋಟ
ಆಕಸ್ಮಿಕ ಬೆಂಕಿಗೆ ಬಲಿಯಾದ ಲಕ್ಷ್ಮೇಶ್ವರ ತಾಲ್ಲೂಕು ಅಕ್ಕಿಗುಂದ ತಾಂಡಾದ ಹಣ್ಣಿನ ತೋಟ   

ಲಕ್ಷ್ಮೇಶ್ವರ: ತಾಲ್ಲೂಕಿನ ಅಕ್ಕಿಗುಂದ ತಾಂಡಾದ ಹತ್ತಿರದ ಚೆನ್ನಪಟ್ಟಣ ರಸ್ತೆಗೆ ಹೊಂದಿಕೊಂಡಿರುವ ಹಣ್ಣಿನ ತೋಟಕ್ಕೆ ಆಕಸ್ಮಿಕ ಬೆಂಕಿ ಬಿದ್ದು ತೋಟದಲ್ಲಿ ಹತ್ತಾರು ಜಾತಿಯ ಹಣ್ಣಿನ ಮರಗಳು ಸುಟ್ಟು ಕರಕಲಾಗಿವೆ.

ಅಕ್ಕಿಗುಂದ ತಾಂಡಾದ ನಿವಾಸಿ ಶಾಂತವ್ವ ಭಜನಪ್ಪ ಲಮಾಣಿ ಅವರ ಎರಡು ತೋಟಕ್ಕೆ ಬೆಂಕಿ ಹೊತ್ತಿಕೊಂಡಿದೆ. ತೋಟದಲ್ಲಿ ಬೆಳೆದು ನಿಂತಿದ್ದ ನೂರಾರು ಚಿಕ್ಕು, ಮಾವು, ತೆಂಗು ಸೇರಿದಂತೆ ಮತ್ತಿತರ ಹಣ್ಣಿನ ಗಿಡಗಳು ಬೆಂಕಿಗೆ ಆಹುತಿ ಆಗಿವೆ. ಗ್ರಾಮ ಲೆಕ್ಕಾಧಿಕಾರಿ ವಿಭೂತಿ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT