ಲಕ್ಷ್ಮೇಶ್ವರ: ಶಾಲೆ ಬಿಡುವ ಸಮಯಕ್ಕೆ ಊರಿಗೆ ಹೋಗಲು ಸರಿಯಾಗಿ ಬಸ್ ಬರುತ್ತಿಲ್ಲ. ಹೀಗಾಗಿ ಮನೆಗೆ ಹೋಗಲು ತೊಂದರೆ ಆಗುತ್ತಿದೆ. ಸರಿಯಾದ ಸಮಯಕ್ಕೆ ಬಸ್ ಬಿಡಬೇಕು’ ಎಂದು ಒತ್ತಾಯಿಸಿ ತಾಲ್ಲೂಕಿನ ಶಿಗ್ಲಿ ಗ್ರಾಮದಲ್ಲಿ ಸೋಮವಾರ ನೂರಾರು ಶಾಲಾ ಮಕ್ಕಳು ಬಸ್ ತಡೆದು ಪ್ರತಿಭಟನೆ ನಡೆಸಿದರು.
ಕಡಕೋಳ, ನಾಯಿಕೆರೂರ, ಹೊನ್ನಿಕೊಪ್ಪ, ಹೂವಿನಶಿಗ್ಲಿ ಸೇರಿದಂತೆ ಮತ್ತಿತರ ಗ್ರಾಮಗಳಿಂದ ಪ್ರತಿದಿನ ನೂರಾರು ಮಕ್ಕಳು ಶಿಗ್ಲಿಯ ಶಾಲೆಗಳಿಗೆ ಬರುತ್ತಾರೆ. ಆದರೆ ಸಂಜೆ ಶಾಲೆ ಬಿಟ್ಟ ನಂತರ ತಮ್ಮ ತಮ್ಮ ಊರುಗಳಿಗೆ ಹೋಗಲು ಬಸ್ಗಳೇ ಇರುವುದಿಲ್ಲ. ಹೀಗಾಗಿ ಸರಿಯಾದ ವೇಳೆಗೆ ಮನೆಗೆ ಹೋಗಲು ಆಗುತ್ತಿಲ್ಲ ಎಂದು ಪ್ರತಿಭಟನಾನಿರತ ಮಕ್ಕಳು ಅಳಲು ತೋಡಿಕೊಂಡರು.
ವಿಷಯ ತಿಳಿಯುತ್ತಿದ್ದಂತೆ ಘಟಕ ವ್ಯವಸ್ಥಾಪಕರು ಶಿಗ್ಲಿಯಿಂದ ಕಡಕೋಳ ಗ್ರಾಮಕ್ಕೆ ಮೊದಲು ಮಕ್ಕಳನ್ನು ಬಿಟ್ಟ ನಂತರ ಅದೇ ಬಸ್ನ್ನು ಹೂವಿನಶಿಗ್ಲಿಗೆ ಹೋಗಲು ವ್ಯವಸ್ಥೆ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.