ನರಗುಂದ: ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಬುಧವಾರ ಮಧ್ಯಾಹ್ನ ಕೆಲಹೊತ್ತು ಜೋರಾಗಿ ಹಾಗೂ ತುಂತುರು ಮಳೆ ಸುರಿಯುವ ಮೂಲಕ ರೈತರನ್ನು ಮತ್ತೆ ಸಂತಸಗೊಳಿಸಿತು. ಕೃಷಿ ಚಟುವಟಿಕೆಗೆ ಅನುವು ಮಾಡಿಕೊಟ್ಟಿತು.
ಮಧ್ಯಾಹ್ನ 3 ಗಂಟೆ ಸುಮಾರಿಗೆ ತುಸು ಜೋರಾಗಿ ಮಳೆ ಸುರಿದು, ಸಂಜೆಯ ವರೆಗೂ ತುಂತುರಾಗಿ ಮುಂದವರಿಯಿತು.
ರಸ್ತೆ ಕೆಸರುಮಯ: ನಿರಂತರ ತುಂತುರು ಮಳೆಗೆ ಕೆಲವು ಓಣಿಗಳ, ನಗರಗಳ ರಸ್ತೆಗಳು ಕೆಸರುಮಯವಾಗಿ ಸಂಚರಿಸಲು ತೊಂದರೆ ಪಡಬೇಕಾಯಿತು.
ಸಂತೆದಿನ ಅಸ್ತವ್ಯಸ್ತ: ಬುಧವಾರ ಸಂತೆ ದಿನವಾಗಿದ್ದರಿಂದ ತರಕಾರಿ ಖರೀದಿಸಲು ಸಾರ್ವಜನಿಕರು ಮಳೆಯ ನಡುವೆ ಹರಸಾಹಸ ಪಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.