ADVERTISEMENT

ಬೇಲೂರು: ಸಿಡಿಲು ಬಡಿದು 17 ಜನರಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2024, 16:25 IST
Last Updated 11 ಆಗಸ್ಟ್ 2024, 16:25 IST
<div class="paragraphs"><p>ಸಿಡಿಲು (ಸಾಂದರ್ಭಿಕ ಚಿತ್ರ )</p></div>

ಸಿಡಿಲು (ಸಾಂದರ್ಭಿಕ ಚಿತ್ರ )

   

ಬೇಲೂರು (ಹಾಸನ): ತಾಲ್ಲೂಕಿನ ಕೊರ್ಲಗದ್ದೆ ಗ್ರಾಮದ ಹೊಲದಲ್ಲಿ ಕೆಲಸ ಮಾಡುತ್ತಿದ್ದ 17 ಜನರಿಗೆ ಸಿಡಿಲು ಬಡಿದಿದ್ದು, ಒಬ್ಬ ಮಹಿಳೆಯ ಸ್ಥಿತಿ ಗಂಭೀರವಾಗಿದೆ.

ಲತಾ ಎಂಬುವವರಿಗೆ ಗಂಭೀರ ಗಾಯಗಳಾಗಿವೆ. ರೇಣುಕಾ, ಸವಿತಾ, ಸುಮಿತ್ರಾ, ರೇಣುಕಮ್ಮ, ನೇತ್ರಾ, ನಿರ್ಮಲಾ, ವೀಣಾ, ಅನಿತಾ, ಮಂಜುಳಾ, ಪುಷ್ಪಾ, ಭಾಗ್ಯ, ಶಾರದಮ್ಮ, ಜಯಂತಿ, ಗಾಯತ್ರಮ್ಮ, ಮಂಜುಳಮ್ಮ ಸೇರಿದಂತೆ 17 ಜನರನ್ನು ಸಕಲೇಶಪುರದ ಕ್ರಾಫರ್ಡ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.

ADVERTISEMENT

ಗ್ರಾಮದ ಬಿ.ಕೆ. ಚಂದ್ರು ಎಂಬುವವರ ಗದ್ದೆಯಲ್ಲಿ 25 ಮಂದಿ ಭತ್ತದ ನಾಟಿ ಮಾಡುತ್ತಿದ್ದರು. ಈ ವೇಳೆ ಮಳೆ ಶುರುವಾಗಿದ್ದು, ಸಿಡಿಲು ಬಡಿದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.