ಅರಸೀಕೆರೆ: ತಾಲ್ಲೂಕಿನ ಕಟ್ಟೆ ಹೋಬಳಿ ಜನ್ನಾವರದಲ್ಲಿ ಗುರುವಾರ ಬೆಳಗಿನ ಜಾವ 5.30ರಲ್ಲಿ ತೋಟಕ್ಕೆ ಹೋಗಿದ್ದ ರೈತ ಮಹಾಲಿಂಗಪ್ಪ ಅವರ ಮೇಲೆ ಕರಡಿ ದಾಳಿ ಮಾಡಿ ತುಟಿಯನ್ನು ಕಚ್ಚಿದ್ದಲ್ಲದೇ, ತಲೆಯ ಮೇಲ್ಭಾಗವನ್ನು ಕಿತ್ತು ಹಾಕಿದೆ.
ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಲಾಯಿತು. ಅರಣ್ಯ ಇಲಾಖೆ ಸಿಬ್ಬಂದಿ ಆಸ್ಪತ್ರೆಗೆ ಬಂದು ತೀವ್ರವಾಗಿ ಗಾಯಗೊಂಡ ರೈತನನ್ನು ಹೆಚ್ಚಿನ ಚಿಕಿತ್ಸೆಗೆ ಹಾಸನದ ಹಿಮ್ಸ್ ಕಳುಹಿಸಿದ್ದಾರೆ.
ಕಳೆದ ವರ್ಷ ಕರಡಿ ದಾಳಿ ಎರಡು ಪ್ರಕರಣಗಳು ನಡೆದಿದ್ದು, ತಾಲ್ಲೂಕಿನ ಗ್ರಾಮಸ್ಥರು ಆ ಪ್ರಕರಣಗಳನ್ನು ಮರೆಯುವ ಮುನ್ನವೇ ಇಂದು ಮತ್ತೊಂದು ಪ್ರಕರಣ ನಡೆದಿರುವುದು ಜನತೆಯಲ್ಲಿ ಆತಂಕ ಮೂಡಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.