ADVERTISEMENT

ಹಳೇಬೀಡು | ಕೊಟ್ಟಿಗೆ ಕುಸಿದು ಹಸು ಸಾವು: ಪರಿಹಾರದ ಚೆಕ್‌ ವಿತರಣೆ

​ಪ್ರಜಾವಾಣಿ ವಾರ್ತೆ
Published 23 ಜುಲೈ 2024, 14:24 IST
Last Updated 23 ಜುಲೈ 2024, 14:24 IST
ಹಳೇಬೀಡು ಸಮೀಪದ ಸಂಕೇನಹಳ್ಳಿಯ ಅಣ್ಣಪ್ಪ ಅವರಿಗೆ ಶಾಸಕ ಎಚ್.ಕೆ.ಸುರೇಶ್ ಪರಿಹಾರದ ಚೆಕ್ ವಿತರಿಸಿದರು
ಹಳೇಬೀಡು ಸಮೀಪದ ಸಂಕೇನಹಳ್ಳಿಯ ಅಣ್ಣಪ್ಪ ಅವರಿಗೆ ಶಾಸಕ ಎಚ್.ಕೆ.ಸುರೇಶ್ ಪರಿಹಾರದ ಚೆಕ್ ವಿತರಿಸಿದರು   

ಹಳೇಬೀಡು: ಸಮೀಪದ ಮಾದಿಹಳ್ಳಿ ಹೋಬಳಿಯ ಸಂಕೇನಹಳ್ಳಿಯಲ್ಲಿ ಇತ್ತೀಚೆಗೆ ಮಳೆಯಿಂದ ಕೊಟ್ಟಿಗೆ ಕುಸಿದು ಎರಡು ಹಸುಗಳು ಮೃತಪಟ್ಟಿದ್ದು, ಅವುಗಳ ಮಾಲೀಕ ಅಣ್ಣಪ್ಪ ಅವರಿಗೆ ಶಾಸಕ ಎಚ್.ಕೆ.ಸುರೇಶ್ ಸೋಮವಾರ ₹95 ಸಾವಿರ ಪರಿಹಾರದ ಚೆಕ್ ವಿತರಿಸಿದರು. 

ಬಳಿಕ ಮಾತನಾಡಿದ ಅವರು, ‘ಜಾನುವಾರು ರೈತನ ಬೆನ್ನೆಲುಬು. ಎತ್ತು, ಹಸುಗಳನ್ನು ಕಳೆದುಕೊಂಡರೆ ರೈತನ ಕೈ ಮುರಿದಂತಾಗುತ್ತದೆ. ಹೀಗಾಗಿ, ಸರ್ಕಾರದಿಂದ ಪರಿಹಾರ ನೀಡಲಾಗುತ್ತಿದೆ’ ಎಂದರು.

ತಹಶೀಲ್ದಾರ್ ಎಂ.ಮಮತ, ಪಶು ವೈದ್ಯಕೀಯ ಇಲಾಖೆ ಸಹಾಯಕ ನಿರ್ದೇಶಕ ಡಾ.ಸದಾಶಿವ, ಮುಖಂಡ ಪರ್ವತಯ್ಯ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.