ADVERTISEMENT

ಪ್ರಜ್ವಲ್‌, ಸೂರಜ್‌ ವಿರುದ್ಧದ ಪ್ರಕರಣ | ಕಾನೂನು ಎಲ್ಲರಿಗೂ ಒಂದೇ: ಜಿ.ಪರಮೇಶ್ವರ್

​ಪ್ರಜಾವಾಣಿ ವಾರ್ತೆ
Published 25 ಜೂನ್ 2024, 4:24 IST
Last Updated 25 ಜೂನ್ 2024, 4:24 IST
ಗೃಹಸಚಿವ ಜಿ. ಪರಮೇಶ್ವರ್
ಗೃಹಸಚಿವ ಜಿ. ಪರಮೇಶ್ವರ್   

ಹಾಸನ: ‘ಜಿಲ್ಲೆಯಲ್ಲಿ ನಡೆದಿರುವ ಅಪರಾಧ ಪ್ರಕರಣಗಳಲ್ಲಿ ಯಾರನ್ನೂ ರಕ್ಷಿಸದೇ, ಯಾವ ಒತ್ತಡಕ್ಕೂ ಮಣಿಯದೇ ಕ್ರಮ ಕೈಗೊಂಡಿದ್ದೇವೆ. ಎಲ್ಲರಿಗೂ ಇರುವುದು ಒಂದೇ ಕಾನೂನು’ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ಪ್ರತಿಪಾದಿಸಿದರು.

ನಗರದ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಇಲಾಖೆಯ ಪ್ರಗತಿ ಪರಿಶೀಲನೆ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸೂರಜ್ ರೇವಣ್ಣ ಪ್ರಕರಣ ರಾಜಕೀಯ ಷಡ್ಯಂತ್ರ ಎಂದು ಎಚ್.ಡಿ. ಕುಮಾರಸ್ವಾಮಿ ಆರೋಪಿಸಿರುವುದು ಸತ್ಯಕ್ಕೆ ದೂರವಾದ ವಿಚಾರ’ ಎಂದರು.

‘ಪ್ರಜ್ವಲ್ ರೇವಣ್ಣ ಪ್ರಕರಣದಲ್ಲೂ ದೂರು ಬಂದ ನಂತರವೇ ಸರ್ಕಾರ ತನಿಖೆಗೆ ಆದೇಶಿಸಿತ್ತು. ರಾಜಕೀಯ ದುರುದ್ದೇಶವಿಲ್ಲ ಎಂಬುದು ಅದರಿಂದಲೇ ಸಾಬೀತಾಗುತ್ತಿದೆ. ಎರಡೂ ಕಡೆಯ ದೂರನ್ನು ಪರಿಗಣಿಸಿ ತನಿಖೆ ನಡೆದಿದೆ. ಎಸ್ಐಟಿ ತನಿಖೆಯ ಬಗ್ಗೆ ಸಂಶಯ ಬೇಡ’ ಎಂದು ಸ್ಪಷ್ಟಪಡಿಸಿದರು.

ADVERTISEMENT

‘ರಾಜ್ಯದಲ್ಲಿ ಕೋಮುಗಲಭೆ ತಡೆಯಲು ಗಂಭೀರ ಕ್ರಮ ಕೈಗೊಳ್ಳಲಾಗುತ್ತಿದೆ. ಒಂದು ವರ್ಷದಲ್ಲಿ ಕೋಮುಗಲಭೆಯಾಗಿಲ್ಲ. ಗಣೇಶ ಹಬ್ಬ ಶಾಂತಿಯುತವಾಗಿ ನಡೆದಿದೆ. ದಕ್ಷಿಣ ಕನ್ನಡ, ಶಿವಮೊಗ್ಗ, ಹುಬ್ಬಳ್ಳಿ ಜಿಲ್ಲೆಗಳಲ್ಲಿ ‌ಕೋಮು ಗಲಭೆಗಳು ನಿಂತಿವೆ. ಈ ಬಗ್ಗೆ ವಿರೋಧಪಕ್ಷಗಳು ಹೇಳಬೇಕು’ ಎಂದರು.

‘ಎಚ್.ಡಿ. ರೇವಣ್ಣ ಕುಟುಂಬದವರ ವಿರುದ್ಧ ದಾಖಲಾಗುತ್ತಿರುವ ದೂರುಗಳಲ್ಲಿ ಕಾಂಗ್ರೆಸ್ ಪಕ್ಷದವರ ಪಾತ್ರವಿಲ್ಲ
ದಿನೇಶ್‌ ಗುಂಡೂರಾವ್‌ ಆರೋಗ್ಯ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.