ADVERTISEMENT

ಹೊಳೆನರಸೀಪುರ | ಪ್ರೀತಿ ವಿಚಾರ: ಆತ್ಮಹತ್ಯೆಗೆ ಯತ್ನಿಸಿದ್ದ ಯುವಕ ಸಾವು

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2024, 13:48 IST
Last Updated 19 ಮಾರ್ಚ್ 2024, 13:48 IST
<div class="paragraphs"><p>ರಾಧಕೃಷ್ಣ (24)</p></div>

ರಾಧಕೃಷ್ಣ (24)

   

ಹೊಳೆನರಸೀಪುರ: ಪಟ್ಟಣದ ಹೇಮಾವತಿ ಸೇತುವೆ ಬಳಿಯ ರೈಲ್ವೆ ಟ್ರ್ಯಾಕ್ ಮೇಲೆ ವಿಷ ಸೇವಿಸಿ, ಸೋಮವಾರ ಆತ್ಮಹತ್ಯೆಗೆ ಯತ್ನಿಸಿದ್ದ ಪ್ರೇಮಿ ನಗರನಹಳ್ಳಿಯ ರಾಧಕೃಷ್ಣ (24) ಮೃತಪಟ್ಟಿದ್ದಾರೆ.

ಆತ್ಮಹತ್ಯೆಗೆ ಯತ್ನಿಸಿದ್ದ ಪ್ರೇಮಿಗಳಲ್ಲಿ ಯುವತಿ ಹಾಸನದ ಹಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಂಗೇನಹಳ್ಳಿ ಸಮೀಪದ ನಗರನಹಳ್ಳಿ ಗ್ರಾಮದ ಗಂಗಾಧರ ಎಂಬವರ ಪುತ್ರ ರಾಧಕೃಷ್ಣ ಮೈಸೂರಿನಲ್ಲಿ ಕೆಲಸ ಮಾಡಿಕೊಂಡಿದ್ದರು. ರಾಧಕೃಷ್ಣ ಅವರಿಗೆ ತಂದೆ, ತಾಯಿ, ಒಬ್ಬರು ಸಹೋದರಿ ಇದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.