ಶ್ರವಣಬೆಳಗೊಳ: ಹೋಬಳಿಯ ಕುಂಬೇನಹಳ್ಳಿಯ ಕಾರ್ತಿಕ್ ಅವರ ಪತ್ನಿ ಪವಿತ್ರಾ (22) ಅವರ ಶವ ನೇಣುಬಿಗಿದ ಸ್ಥಿತಿಯಲ್ಲಿ ಗುರುವಾರ ಪತ್ತೆಯಾಗಿದೆ.
ಹೋಬಳಿಯ ದಡಿಘಟ್ಟ ಗ್ರಾಮದ ಪವಿತ್ರಾ ಹಾಗೂ ಕಾರ್ತಿಕ್ ಎರಡು ವರ್ಷದ ಹಿಂದೆ ವಿವಾಹವಾಗಿದ್ದರು. ದಂಪತಿಗೆ ಒಂದು ವರ್ಷದ ಗಂಡು ಮಗುವಿದೆ.
‘ಕಾರ್ತಿಕ್ ಅವರ ತಾಯಿ ಯಶೋದಾ, ಮಾವ ಪ್ರಸಾದ್ ಅವರು ಪವಿತ್ರಾಗೆ ಮಾನಸಿಕ ಹಿಂಸೆ ಕಿರುಕುಳ ನೀಡುತ್ತಿದ್ದರು. ಯಶೋದಾ ಅವರು ಪರಮೇಶ್ ಅವರೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದು ಇದನ್ನು ಪ್ರಶ್ನಿಸಿದ್ದಕ್ಕೆ ಪವಿತ್ರಾಳ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ. ಮಗಳ ಸಾವಿಗೆ ಯಶೋದಾ, ಪರಮೇಶ್, ಪ್ರಸಾದ್ ಹಾಗೂ ಕಾರ್ತಿಕ್ ಕಾರಣ’ ಎಂದು ಪವಿತ್ರಾ ಪೋಷಕರು ಹಾಗೂ ಸಹೋದರ ರೋಹಿತ್ ಶ್ರವಣಬೆಳಗೊಳ ಠಾಣೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ.
ಹಾಸನದ ಹಿಮ್ಸ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಎಸ್ಪಿ ಮೊಹಮದ್ ಸುಜಿತಾ, ಎಸ್ಐ ಸುಬ್ರಹ್ಮಣ್ಯ ಭೇಟಿ ನೀಡಿ ಪರಿಶೀಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.