ಬೇಲೂರು: ಬೇಲೂರು– ಹಳೇಬೀಡು ಯೋಜನಾ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ಸೈಯದ್ ತೌಫಿಕ್ ಅಧಿಕಾರ ಸ್ವೀಕರಿಸಿದರು.
ಸೈಯದ್ ತೌಫಿಕ್ ಮಾತನಾಡಿ, ‘ಸಿಕ್ಕಿರುವ ಅವಧಿಯಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವಂತಹ ಕೆಲಸಗಳನ್ನು ಮಾಡಿ ಯೋಜನಾ ಪ್ರಾಧಿಕಾರ ಜನಸ್ನೇಹಿಯಾಗಿರುವಂತೆ ನೋಡಿಕೊಳ್ಳುತ್ತೇನೆ’ ಎಂದರು.
ವೀರಣ್ಣ, ಸುದರ್ಶನ್, ಕೇಶವಮೂರ್ತಿ ಪ್ರಾಧಿಕಾರದ ಸದಸ್ಯರಾಗಿ ಅಧಿಕಾರ ಸ್ವೀಕರಿಸಿದರು.
ರವಿ ನಾಕಲಗೂಡು, ಅತೀಕ್, ಕಾಂಗ್ರೆಸ್ ಮುಖಂಡರಾದ ಬಿ.ಎಂ.ಸಂತೋಷ್, ಜಿ.ಶಾಂತಕುಮಾರ್, ಗೋಪಿನಾಥ್, ಎಂ.ಆರ್.ವೆಂಕಟೇಶ್, ಚಂದ್ರಶೇಖರ, ಸಿ.ಎನ್.ದಾನಿ, ಬಿ.ಎಂ.ರಂಗನಾಥ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.