ತಡಸ (ದುಂಡಶಿ): ಮುಂಗಾರು ಮಳೆ ಅಬ್ಬರದ ನಡುವೆಯೇ ದುಂಡಶಿ ಅರಣ್ಯ ವಲಯದ ಅರಣ್ಯ ಅಭಿವೃದ್ಧಿ ಚಟುವಟಿಕೆ ಗರಿಗದರಿದೆ. ಅರಣ್ಯ ಇಲಾಖೆಯ ಸಹಭಾಗಿತ್ವದಲ್ಲಿ ಶಿಗ್ಗಾವಿ ತಾಲ್ಲೂಕಿನಲ್ಲಿ ವಿವಿಧ ಕಡೆ ಸಸಿ ನಡುವ ಕಾರ್ಯ ಜೋರಾಗಿದೆ.
ಪ್ರಸಕ್ತ ವರ್ಷ ದುಂಡಶಿ ಉಪ ವಿಭಾಗದಲ್ಲಿ ಅರಣ್ಯ ಇಲಾಖೆಯ ಅರಣ್ಯ ಕಿರಣ ಪ್ರಕ್ರಿಯೆ ಚುರುಕಾಗಿ ನಡೆದಿದ್ದು ಮುಕ್ತಾಯದ ಹಂತದಲ್ಲಿದೆ. ವಿವಿಧ ಭಾಗಗಳಲ್ಲಿ ಅರಣ್ಯ ಇಲಾಖೆಯಯವರು ಹಲವು ಬಗೆಯ ತಳಿಯ ಸಸಿಗಳನ್ನು ನೆಡುತ್ತಿದ್ದರೆ, ಅರಣ್ಯ ಇಲಾಖೆಗೆ ಸಂಬಂಧಿಸಿದ ನರ್ಸರಿಗಳಲ್ಲಿ ಬೆಳೆಯಲಾದ ಸಸಿಗಳನ್ನು ಎಲ್ಲ ಗ್ರಾಮಗಳಿಗೆ ತಲುಪಿಸಲಾಗುತ್ತಿದೆ.
ಅರಣ್ಯ ಇಲಾಖೆಗೆ ಸಂಬಂಧಿಸಿದ ಸಸ್ಯಪಾಲನ ಮಡ್ಲಿ ಹಾಗೂ ಸಾಮಾಜಿಕ ಅರಣ್ಯ ಜಕ್ಕನಕಟ್ಟಿ ಕ್ಷೇತ್ರಗಳಿವೆ ಸುಮಾರು 15 ಸಾವಿರ ಸಸಿಗಳು ರೈತರಿಗೆ ರಿಯಾಯಿತಿ ದರದಲ್ಲಿ (₹3, ₹6, ₹9) ಲಭ್ಯವಿದೆ.
ಮಲೆನಾಡು ಹಾಗೂ ಅರೆಮಲೆನಾಡು ಪ್ರದೇಶಕ್ಕೆ ಹಂಚಿಕೊಂಡಿರುವ ಈ ಪ್ರದೇಶ ಹೊಂದಿಕೊಳ್ಳುವ ಜಾತಿಯ ಸಸಿಗಳು ಆಲ, ಅರಳಿ, ಗೋಣಿ, ಹೊಂಗೆ, ತೇಗ ,ಬಿದಿರು ನೇರಳೆ, ಶ್ರೀಗಂಧ ಸಿಲ್ವರ್ ವೋಕ್ ಲಿಂಬು ಕರಿಬೇವು, ಸಾಗವಾನಿ, ಮಹಾಗನಿ, ಹಲಸು ಮುಂತಾದ ಸಸಿಗಳು ರೈತರಿಗೆ ಲಭ್ಯವಿದೆ.
‘ದುಂಡಸಿ ಉಪ ವಿಭಾಗದಲ್ಲಿ ಅರಣ್ಯ ಇಲಾಖೆಯ ನರೇಗಾ ಯೋಜನೆಯಡಿ ಸುಮಾರು 10 ಸಾವಿರ ಸಸಿಗಳನ್ನು ನೆಡಲಾಗಿದೆ. ಇದರಿಂದ ಹಲವಾರು ಕಾರ್ಮಿಕರಿಗೆ ಮಳೆಗಾಲದಲ್ಲಿ ಕೆಲಸ ಸಿಕ್ಕಂತಾಗಿದೆ. ಮುಂಗಾರು ಮಳೆಯಲ್ಲಿ ಮನೆ ನಡೆಸುವ ಕಷ್ಟದಲ್ಲಿ ಅರಣ್ಯ ಇಲಾಖೆಯವರು ನರೇಗಾ ಯೋಜನೆಯಡಿ ಕೆಲಸ ನೀಡಿದ್ದು, ಉತ್ತಮ ಕಾರ್ಯವಾಗಿದೆ’ ಎಂದು ನರೇಗಾ ಕೂಲಿ ಕಾರ್ಮಿಕ ಗೋಪಾಲ ಲಮಾಣಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.