ADVERTISEMENT

ಗುಬ್ಬಿ ನಂಜುಂಡೇಶ್ವರ ಸ್ವಾಮಿ ಮಹಾ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 17 ಜನವರಿ 2024, 7:09 IST
Last Updated 17 ಜನವರಿ 2024, 7:09 IST
ತಿಳವಳ್ಳಿ ಸಮೀಪದ ಹೊಂಕಣ ಗ್ರಾಮದ ಗುಬ್ಬಿ ನಂಜುಂಡೇಶ್ವರ ಸ್ವಾಮಿ ಹಾಗೂ ಹೊಳಿಲಿಂಗೇಶ್ವರ ಮಹಾ ರಥೋತ್ಸವ ಮಂಗಳವಾರ ನಡೆಯಿತು
ತಿಳವಳ್ಳಿ ಸಮೀಪದ ಹೊಂಕಣ ಗ್ರಾಮದ ಗುಬ್ಬಿ ನಂಜುಂಡೇಶ್ವರ ಸ್ವಾಮಿ ಹಾಗೂ ಹೊಳಿಲಿಂಗೇಶ್ವರ ಮಹಾ ರಥೋತ್ಸವ ಮಂಗಳವಾರ ನಡೆಯಿತು   

ತಿಳವಳ್ಳಿ: ಸಮೀಪದ ಹೊಂಕಣ ಗ್ರಾಮದ ಹೊಳಿಲಿಂಗೇಶ್ವರ ಹಾಗೂ ಗುಬ್ಬಿ ನಂಜುಂಡೇಶ್ವರ ಸ್ವಾಮಿ ಮಹಾ ರಥೋತ್ಸವವು ಮಂಗಳವಾರ ಅದ್ಧೂರಿಯಾಗಿ ನಡೆಯಿತು.

ರಥೋತ್ಸವವು ಡೊಳ್ಳು, ಭಜನೆ, ಸಮ್ಮಾಳ, ಗುಗ್ಗಳ, ವೀರಗಾಸೆ ತಂಡಗಳೊಂದಿಗೆ ಗ್ರಾಮದ ಹಳೆಯ ಮಠದಿಂದ ಹೊರಟು ಪ್ರಮುಖ ಬೀದಿಗಳಲ್ಲಿ ಹಾದು ಗುಬ್ಬಿ ಅಜ್ಜನ ಮಠಕ್ಕೆ ಬಂದು ಸಂಪನ್ನಗೊಂಡಿತು. ರಥಕ್ಕೆ ಜನರು ಬಾಳೆಹಣ್ಣು, ಉತ್ತತ್ತಿ ಎಸೆದು ಭಕ್ತಿ ಸಮರ್ಪಿಸಿದರು.

ಮಠದ ಆವರಣದಲ್ಲಿ ಜಾತ್ರೆಗೆ ಬಂದ ಭಕ್ತರಿಗೆ ಪ್ರಸಾದದ ವ್ಯವಸ್ಥೆ ಕಲ್ಪಿಸಲಾಗಿತ್ತು.

ADVERTISEMENT

ಬೆಲೂರಿನ ಪುಷ್ಪಗಿರಿ ಸಂಸ್ಥಾನ ಮಠದ ಸೋಮಶೇಖರ ಸ್ವಾಮೀಜಿ, ನಿರಂಜನಾನಂದಪುರಿ ಸ್ವಾಮೀಜಿ, ಕನಕ ಗುರುಪೀಠ ಕಾಗಿನೆಲೆ, ಹೊತನಳ್ಳಿಯ ಸಿದ್ಧರೂಢ ಮಠದ ಶಂಕರಾನಂದ ಸ್ವಾಮೀಜಿ ಸಾನ್ನಿಧ್ಯದಲ್ಲಿ ವಿವಿಧ ಪೂಜಾ ಕಾರ್ಯಕ್ರಮಗಳು ನೇರವೆರಿದವು. ಹೊಂಕಣ ಸೇರಿದಂತೆ ಸುತ್ತಲಿನ ಗ್ರಾಮಗಳ ಜನರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.