ರಟ್ಟೀಹಳ್ಳಿ: ತಾಲ್ಲೂಕಿನ ಬಹುಜನರ ಬೇಡಿಕೆಯಂತೆ ಹಿರೇಕೆರೂರನಿಂದ ಬೆಂಗಳೂರಿಗೆ ಬಸ್ ಸಂಚಾರ ಪ್ರಾರಂಭಿಸಲಾಗಿದೆ ಎಂದು ಶಾಸಕ ಯು.ಬಿ.ಬಣಕಾರ ಹೇಳಿದರು.
ನೂತನ ಬಸ್ ಸಂಚಾರಕ್ಕೆ ಮಂಗಳವಾರ ರಟ್ಟೀಹಳ್ಳಿ ಪಟ್ಟಣದ ಬಸ್ ನಿಲ್ದಾಣದಲ್ಲಿ ಹಸಿರುನಿಶಾನೆ ತೋರಿಸಿದರು.
ಪ್ರತಿದಿನ ಬೆಳಿಗ್ಗೆ 10.30ಕ್ಕೆ ಹಿರೇಕೆರೂರಿನಿಂದ ಹೊರಟು ಮಾಸೂರು, ರಟ್ಟೀಹಳ್ಳಿ, ರಾಣೇಬೆನ್ನೂರ ಮಾರ್ಗವಾಗಿ ಬೆಂಗಳೂರಿಗೆ ಸಂಚರಿಸಲಿದೆ ಎಂದು ಹೇಳಿದರು.
ತಹಶೀಲ್ದಾರ ಕೆ. ಗುರುಬಸವರಾಜ, ನಿಲ್ದಾಣಾಧಿಕಾರಿ ಕಮ್ಮಾರ, ಪಿಎಸ್ಐ ಕೃಷ್ಣಪ್ಪ ತೋಪಿನ ಮುಖಂಡರಾದ ಪಿ.ಡಿ. ಬಸನಗೌಡ್ರ, ಮಹೇಶ ಗುಬ್ಬಿ, ಪರಮೇಶ್ವರಪ್ಪ ಕಟ್ಟೇಕಾರ, ವಸಂತ ದ್ಯಾವಕ್ಕಳವರ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.