ಬ್ಯಾಡಗಿ: ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಭಾನುವಾರ ಸಂಜೆ ಗಾಳಿ, ಗುಡುಗು ಸಹಿತ ಮಳೆಯಾಯಿತು.
ಒಂದು ಗಂಟೆ ಸುರಿದ ಮಳೆ ತಂಪೆರೆಯಿತು. ಮುಂಗಾರು ಹಂಗಾಮಿನಲ್ಲಿ ಬೆಳೆದ ಗೋವಿನ ಜೋಳ, ಶೇಂಗಾ ಹಾಗೂ ಮತ್ತಿತರ ಬೆಳೆ ಕೊಯ್ಲು ಮಾಡಿದ ರೈತರು ರಾಶಿ ಮಾಡಲು ಪರದಾಡಿದರು.
ವಿವಿಧೆಡೆ ರಸ್ತೆಯ ಎರಡೂ ಬದಿಯ ಚಂಡಿಗಳಿಲ್ಲದ ಕಾರಣ ನೀರು ನಿಂತು ಕೆರೆಯಾಗಿ ಮಾರ್ಪಟ್ಟಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.