ADVERTISEMENT

ರೇಣುಕಸ್ವಾಮಿ ಹತ್ಯೆ ಹೇಯ‌ ಕೃತ್ಯ, ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ: ಬಿ.ಸಿ.ಪಾಟೀಲ

​ಪ್ರಜಾವಾಣಿ ವಾರ್ತೆ
Published 17 ಜೂನ್ 2024, 5:32 IST
Last Updated 17 ಜೂನ್ 2024, 5:32 IST
<div class="paragraphs"><p>ಬಿ.ಸಿ.ಪಾಟೀಲ</p></div>

ಬಿ.ಸಿ.ಪಾಟೀಲ

   

ಹಾವೇರಿ: 'ಚಿತ್ರದುರ್ಗದ ‌ರೇಣುಕಸ್ವಾಮಿ ಹತ್ಯೆ‌ ಹೇಯ‌ಕೃತ್ಯ. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ರೇಣುಕಸ್ವಾಮಿ‌ ಕುಟುಂಬಕ್ಕೆ ನ್ಯಾಯ ‌ಸಿಗಬೇಕು' ಎಂದು ಬಿಜೆಪಿ‌ ಮುಖಂಡ ಬಿ.ಸಿ.ಪಾಟೀಲ ಆಗ್ರಹಿಸಿದರು.

ನಗರದಲ್ಲಿ‌ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ‌ ಅವರು, 'ನಾನು ಕೃಷಿ‌ ಸಚಿವನಾಗಿದ್ದಾಗ ರೈತರಿಗೆ‌ ಮಾದರಿ‌ ಆಗಲು ಹಾಗೂ ಮಾರ್ಗದರ್ಶನ ಆಗಲು ನಟ ದರ್ಶನ್ ಅವರನ್ನು ರಾಯಭಾರಿ‌ ಮಾಡಿದ್ದೆ. ಅವಾಗ ಅವರ‌ ಮೇಲೆ ಯಾವುದೇ ‌ಪ್ರಕರಣ ಇರಲಿಲ್ಲ' ಎಂದರು.

ADVERTISEMENT

'ಈ‌ ಹತ್ಯೆ ಕ್ಷಮಿಸಲಾರದ ಹೇಯಕೃತ್ಯ. ಕಾನೂನಿಗಿಂತ ದೊಡ್ಡವರು ಯಾರೂ‌ ಇಲ್ಲ. ತಪ್ಪು ಮಾಡಿದವರಿಗೆ ಶಿಕ್ಷೆ ಆಗಬೇಕು' ಎಂದರು.

'ದರ್ಶನ ನಟನಾಗಿ‌ ನನಗೆ ಗೊತ್ತು. ಅದನ್ನು ಬಿಟ್ಟು ಬೇರೆ ನನಗೆ ಗೊತ್ತಿಲ್ಲ. ಅವರ ಜೊತೆಗಿರುವವರ ಬಗ್ಗೆಯೂ ನನಗೆ ಗೊತ್ತಿಲ್ಲ' ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.