ADVERTISEMENT

ಗಾಂಜಾ ಮಾರಾಟ: ಇಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2024, 16:12 IST
Last Updated 11 ಏಪ್ರಿಲ್ 2024, 16:12 IST
   

ಹಾವೇರಿ: ನಗರದ ಹಾನಗಲ್‌ ರಸ್ತೆಯಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಜಾನುವಾರು ಮಾರುಕಟ್ಟೆಯ ಆವರಣದಲ್ಲಿ ನಿಷೇಧಿತ ಹೂವು, ಮೊಗ್ಗು ಬೀಜ ಮಿಶ್ರಿತ ಘಾಟು ವಾಸನೆಯುಳ್ಳ ಗಾಂಜಾವನ್ನು ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕಿನ ಬಂಡಾರಹಳ್ಳಿಯ ಆಟೊ ಚಾಲಕ ಅಭಿಲಾಷ ನೀಲಕಂಠಪ್ಪ (27) ಮತ್ತು ಅದೇ ಗ್ರಾಮದ ಕಾರು ಚಾಲಕ ಅಜಯ ಕೃಷ್ಣಮೂರ್ತಿ (24) ಎಂಬುವರು ಬಂಧಿತರು. ಆರೋಪಿಗಳಿಂದ ₹22,900 ಮೌಲಯ್ದ 458 ಗ್ರಾಂ ಗಾಂಜಾ, ಡಿಜಿಟಲ್‌ ತೂಕದ ಯಂತ್ರ, ಮೊಬೈಲ್‌ ಫೋನ್‌, ಆಟೊವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಹಾವೇರಿಯ ಸಿಇಎನ್‌ ಕ್ರೈಂ ಪೊಲೀಸ್‌ ಠಾಣೆಯ ಇನ್‌ಸ್ಪೆಕ್ಟರ್‌ ಶಿವಶಂಕರ ಗಣಾಚಾರಿ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿ, ಪ್ರಕರಣ ದಾಖಲಿಸಿದೆ

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.