ಮಡ್ಲೂರ(ಹಂಸಬಾವಿ): ರೈತರ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗದಂತೆ ಕೆರೆಗಳಿಗೆ ನೀರು ತುಂಬಿಸಬೇಕು. ಅನಗತ್ಯವಾಗಿ ಕೆರೆಗಳಿಂದ ನೀರು ಪೋಲಾಗುವುದನ್ನು ತಡೆಯಬೇಕು ಎಂದು ಶಾಸಕ ಯು.ಬಿ.ಬಣಕಾರ ಹೇಳಿದರು.
ಇಲ್ಲಿಗೆ ಸಮೀಪದ ಮಡ್ಲೂರ ಗ್ರಾಮದ ಏತ ನೀರಾವರಿಯ ಸುಮಾರು 55 ಕೆರೆಗಳಿಗೆ ವರದಾ ನದಿ ನೀರು ಬಿಡುತ್ತಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಹಾಗೂ ರೈತರೊಂದಿಗೆ ಭಾನುವಾರ ಚರ್ಚಿಸಿದರು.
ಕಳೆದ ವರ್ಷ ಕೆರೆಗಳಿಗೆ ನೀರು ಬಿಡುವ ಸಂದರ್ಭದಲ್ಲಿ ಪೈಪ್ಲೈನ್ಗಳು ಅಲ್ಲಿಲ್ಲಿ ಸೋರಿಕೆಯಾಗಿ ಕೃಷಿ ಚಟುವಟಿಕೆಗಳಿಗೆ ತೊಡುಕು ಉಂಟಾಗುವುದಲ್ಲದೇ ಬೆಳೆ ಹಾನಿಯೂ ಸಂಭವಿಸಿತ್ತು. ರೈತರು ಕೂಡಾ ಪೈಪ್ಲೈನ್ ಸೋರಿಕೆಯಿಂದ ತೊಂದರೆ ಉಂಟಾದರೆ ಕೂಡಲೇ ಅಧಿಕಾರಿಗಳ ಗಮನಕ್ಕೆ ತರಬೇಕು. ಅಧಿಕಾರಿಗಳು ನಿರ್ಲಕ್ಷ್ಯ ತೋರದೇ ಕೆರೆಗಳಿಗೆ ನೀರು ತುಂಬಿಸುವ ಕಾರ್ಯವನ್ನು ಅಚ್ಚುಕಟ್ಟಾಗಿ ನಿಭಾಯಿಸಬೇಕು. ವರದಾ ನದಿಗೆ ನೀರು ಬರುವ ಸಂಭವವಿದ್ದು, ಸಧ್ಯದಲ್ಲೇ ಕೆರೆಗಳಿಗೆ ನೀರು ಹರಿಸಲಾಗುವುದು. ರೈತರು ಚಿಂತಿಸುವ ಅಗತ್ಯವಿಲ್ಲ ಎಂದರು.
ಕೆಎನ್ಎನ್ ಅಧಿಕಾರಿಗಳು, ಹೆಸ್ಕಾಂ ಅಧಿಕಾರಿಗಳು, ಎಂಜಿನಿಯರಗಳು ಹಾಗೂ ರೈತರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.