ADVERTISEMENT

ಆಳಂದ | ಗ್ರಾ.ಪಂ. ಉಪಾಧ್ಯಕ್ಷನ ಮೇಲೆ ಹಲ್ಲೆ; ಜಾತಿ ನಿಂದನೆ

​ಪ್ರಜಾವಾಣಿ ವಾರ್ತೆ
Published 23 ಮೇ 2024, 15:52 IST
Last Updated 23 ಮೇ 2024, 15:52 IST
ಶಿವಲಿಂಗಪ್ಪ ಇಂಗಳೆ ಉಪಾಧ್ಗಕ್ಷ , ಗ್ರಾಪಂ ಮಾದನ ಹಿಪ್ಪರಗಿ
ಶಿವಲಿಂಗಪ್ಪ ಇಂಗಳೆ ಉಪಾಧ್ಗಕ್ಷ , ಗ್ರಾಪಂ ಮಾದನ ಹಿಪ್ಪರಗಿ   

ಆಳಂದ: ತಾಲ್ಲೂಕಿನ ಮಾದನಹಿಪ್ಪರಗಿ ಗ್ರಾ.ಪಂ ಉಪಾಧ್ಯಕ್ಷ ಶಿವಲಿಂಗ ಅವರ ಮೇಲೆ ನಾಲ್ವರು ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಿದ್ದಾರೆ ಎಂದು ಮಾದನಹಿಪ್ಪರಗಿ ಪೊಲೀಸ್ ಠಾಣೆಯಲ್ಲಿ ಬುಧವಾರ ಪ್ರಕರಣ ದಾಖಲಾಗಿದೆ.

ಮೇ 21ರಂದು ಶಿವಲಿಂಗೇಶ್ವರ ಮಠದ ಹತ್ತಿರ ವಾರದ ಸಂತೆಯ ಕಸವನ್ನು ಪಂಚಾಯತಿ ಸಿಬ್ಬಂದಿಯೊಂದಿಗೆ ರಸ್ತೆ ಸ್ವಚ್ಛಗೊಳಿಸುತ್ತಿದ್ದ ಪಂಚಾಯಿತಿ ಉಪಾಧ್ಯಕ್ಷ ಶಿವಲಿಂಗಪ್ಪ ಇಂಗಳೆ ಅವರ ಮೇಲೆ ಗ್ರಾಮದ ಲಿಂಗರಾಜ ಜಗದೇವಪ್ಪ, ಗುರುರಾಜ ಅಪ್ಪಶ್ಯಾ, ಬಸವರಾಜ ದಾಸಿಮಯ್ಯ ಹಾಗೂ ಹಣಮಂತ ರುಕ್ಕಪ್ಪ ಸೇರಿಕೊಂಡು ದಾರಿಯಲ್ಲಿ ಕಸದ ವಾಹನ ನಿಂತಿದ್ದನ್ನು ಪ್ರಶ್ನಿಸಿ, ಹಲ್ಲೆ ನಡೆಸಿದ್ದಾರೆ. ಬಳಿಕ ಜಾತಿ ನಿಂದನೆ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ. ತೀವ್ರ ಒಳಪೆಟ್ಟು ಆಗಿರುವುದರಿಂದ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಮಾದನಹಿಪ್ಪರಗಿ ಪೊಲೀಸ್‌ ಠಾಣೆಯ ಪಿಎಸ್‌ಐ ವಿರೇಶ ಕೆ.ಎಂ. ಅವರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.