ADVERTISEMENT

ಆದಿ ಶಂಕರಾಚಾರ್ಯರ ಜಯಂತಿ ಆಚರಣೆ

​ಪ್ರಜಾವಾಣಿ ವಾರ್ತೆ
Published 12 ಮೇ 2024, 15:49 IST
Last Updated 12 ಮೇ 2024, 15:49 IST
ಕಲಬುರಗಿಯ ಎಸ್‌.ಎಂ.ಪಂಡಿತ ರಂಗಮಂದಿರದಲ್ಲಿ ಭಾನುವಾರ ಶಂಕರಾಚಾರ್ಯರ ಜಯಂತಿ ಪ್ರಯುಕ್ತ ಅದ್ವೈತಾಮೃತ ಸ್ತೋತ್ರ ಪಠಣ ಮಾಡಲಾಯಿತು
ಕಲಬುರಗಿಯ ಎಸ್‌.ಎಂ.ಪಂಡಿತ ರಂಗಮಂದಿರದಲ್ಲಿ ಭಾನುವಾರ ಶಂಕರಾಚಾರ್ಯರ ಜಯಂತಿ ಪ್ರಯುಕ್ತ ಅದ್ವೈತಾಮೃತ ಸ್ತೋತ್ರ ಪಠಣ ಮಾಡಲಾಯಿತು   

ಕಲಬುರಗಿ: ನಗರದ ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆಯ ವತಿಯಿಂದ ಭಾನುವಾರ ಆದಿ ಶಂಕರಾಚಾರ್ಯರ ಜಯಂತಿ ಆಚರಿಸಲಾಯಿತು.

ಈ ವೇಳೆ ಶಿಷ್ಟಾಚಾರ ತಹಶೀಲ್ದಾರ್ ನಿಸಾರ್‌ ಅಹಮ್ಮದ್‌ ಹಾಗೂ ಸಮಾಜದ ಮುಖಂಡರು ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಈ ವೇಳೆ ಶಂಕರಾಚಾರ್ಯರ ಅದ್ವೈತಾಮೃತ ಸ್ತೋತ್ರ ಪಠಿಸಲಾಯಿತು. ಮಹಿಳೆಯೊಬ್ಬರು ಭಜನೆ ಹಾಡಿದರು.

ಕಾರ್ಯಕ್ರಮದಲ್ಲಿ ಕಲಬುರಗಿ ಶಂಕರ ಮಠದ ಅಧ್ಯಕ್ಷ ಪಿ.ಎಚ್‌.ಕುಲಕರ್ಣಿ, ಮುರಳಿಧರ ಪೂಜಾರಿ, ಗುರುರಾಜ ಭರತನೂರು, ಗೋಪಾಲಕೃಷ್ಣ ಸರಡಗಿ, ಪಿ.ಆರ್.ಕುಲಕರ್ಣಿ, ಋಷಿಕೇಶ್‌ ಚೌಡಾಪುರಕರ್, ಎಂ.ಬಿ.ಶಾಸ್ತ್ರಿ, ವೇಣುಗೋಪಾಲ ಕುಲಕರ್ಣಿ ಹಾಗೂ ಸಮಾಜದ ಮಹಿಳೆಯರು ಭಾಗವಹಿಸಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.