ADVERTISEMENT

ಬಸವಲಿಂಗ ಪಟ್ಟದ್ದೇವರು ಸೇರಿ ಐವರು ‘ಕರ್ಮಯೋಗಿ’ ಪ್ರಶಸ್ತಿಗೆ ಆಯ್ಕೆ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2024, 22:40 IST
Last Updated 22 ಆಗಸ್ಟ್ 2024, 22:40 IST
<div class="paragraphs"><p>ಬಸವಲಿಂಗ ಪಟ್ಟದ್ದೇವರು</p></div>

ಬಸವಲಿಂಗ ಪಟ್ಟದ್ದೇವರು

   

ಕಲಬುರಗಿ: ಉದ್ಯಮಿ ಎಸ್.ಎಸ್.ಪಾಟೀಲರ ದ್ವಿತೀಯ ಪುಣ್ಯಸ್ಮರಣೆ ಅಂಗವಾಗಿ ಎಸ್.ಆರ್.ಪಾಟೀಲ್‌ ಫೌಂಡೇಷನ್ ಹಾಗೂ ಪಾಟೀಲ ಗ್ರೂಪ್‌ ಆಫ್‌ ಇಂಡಸ್ಟ್ರೀಸ್‌ ನೀಡುವ ‘ಕರ್ಮಯೋಗಿ’ ಪ್ರಶಸ್ತಿಗೆ ಬೀದರ್‌ ಜಿಲ್ಲೆ ಭಾಲ್ಕಿ ಹಿರೇಮಠ ಸಂಸ್ಥಾನದ ಬಸವಲಿಂಗ ಪಟ್ಟದ್ದೇವರು ಸೇರಿದಂತೆ ಐವರು ಸಾಧಕರನ್ನು ಆಯ್ಕೆ ಮಾಡಲಾಗಿದೆ.

ಬಸವಲಿಂಗ ಪಟ್ಟದ್ದೇವರು (ಶಿಕ್ಷಣ) ಬೆಂಗಳೂರಿನಲ್ಲಿ ನೆಲೆಸಿರುವ ಮೂಲತಃ ಕಲಬುರಗಿ ಉದ್ಯಮಿ ಎನ್.ಕೆ.ಮಾಲು (ವಾಣಿಜ್ಯ) ಹಿರಿಯ ಚಿತ್ರಕಲಾವಿದ ವಿ.ಜಿ.ಅಂದಾನಿ (ಕಲಾಕ್ಷೇತ್ರ) ಕೊಪ್ಪಳದ ಸಾಹಿತಿ ಅಲ್ಲಮಪ್ರಭು ಬೆಟದೂರ (ಸಾಹಿತ್ಯ) ಹಾಗೂ ಕ್ಯಾನ್ಸರ್‌ ತಜ್ಞೆ ವಿಜಯಲಕ್ಷ್ಮಿ ದೇಶಮಾನೆ (ಸಮಾಜ ಸೇವೆ) ಅವರು ಈ ಸಾಲಿನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಎಂದು ಫೌಂಡೇಷನ್‌ ಅಧ್ಯಕ್ಷ ಮನು ಬಳಿಗಾರ್‌ ತಿಳಿಸಿದರು

ADVERTISEMENT

ಪ್ರಶಸ್ತಿ ತಲಾ ₹ 51 ಸಾವಿರ, ಫಲಕ ಒಳಗೊಂಡಿರುತ್ತದೆ. ಶುಕ್ರವಾರ ಕಲಬುರಗಿಯ ಎಸ್‌.ಎಂ.ಪಂಡಿತ ರಂಗ ಮಂದಿರದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.