ADVERTISEMENT

ಯಡ್ರಾಮಿ | ರೈತ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2024, 14:52 IST
Last Updated 5 ಫೆಬ್ರುವರಿ 2024, 14:52 IST

ಯಡ್ರಾಮಿ: ತಾಲ್ಲೂಕಿನ ಇಜೇರಿ ಗ್ರಾಮದಲ್ಲಿ ಸೋಮವಾರ ರೈತರೊಬ್ಬರು ಸಾಲದಿಂದ ಮನನೊಂದು ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ರಾಜಶೇಖರ ಹಡಪದ (40) ಮೃತರು. ಮಗಳ ಮದುವೆಗೆಂದು ತಮ್ಮ ಹೆಂಡತಿ ಗುರುಬಾಯಿ ಹೆಸರಲ್ಲಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ಇಜೇರಿ, ಧರ್ಮಸ್ಥಳ ಸಂಘ, ನವಚೇತನ ಬ್ಯಾಂಕ್, ಆಶೀರ್ವಾದ ಬ್ಯಾಂಕ್, ಗ್ರಾಮೀಣ ಕೂಟ ಬ್ಯಾಂಕ್ ಸೇರಿ ₹4,55,000 ಸಾಲ ಮತ್ತು ಖಾಸಗಿ ವ್ಯಕ್ತಿಗಳ ಹತ್ತಿರ ₹10 ಲಕ್ಷ ಸಾಲ ಮಾಡಿದ್ದರು.

ಸಾಲ ತೀರಿಸಲು ಸಾಧ್ಯವಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಈ ಕುರಿತು ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.