ADVERTISEMENT

ಚಿಂಚೋಳಿ | 210 ಕೆಜಿ ತೂಕದ ಮೂಟೆ ಹೊತ್ತು 110 ಅಡಿ ನಡೆದ ನಡೆದ ಯುವಕ

​ಪ್ರಜಾವಾಣಿ ವಾರ್ತೆ
Published 22 ಜೂನ್ 2024, 14:25 IST
Last Updated 22 ಜೂನ್ 2024, 14:25 IST
ಚಿಂಚೋಳಿ ತಾಲ್ಲೂಕು ಸುಲೇಪೇಟದ ವೀರಭದ್ರೇಶ್ವರ ತೇರ್ ಮೈದಾನದಲ್ಲಿ ಶನಿವಾರ 210 ಕೆಜಿ ತೂಕ ಮೂಟೆ ಹೊತ್ತು ಸಾಹಸ ಮೆರೆದ ಸಂತೋಷ ನಾಗಪ್ಪ ಜಾಡರ್ ಅವರಿಗೆ ಸನ್ಮಾನಿಸಿ ನಗದು ಬಹುಮಾನ ವಿತರಿಸಲಾಯಿತು
ಚಿಂಚೋಳಿ ತಾಲ್ಲೂಕು ಸುಲೇಪೇಟದ ವೀರಭದ್ರೇಶ್ವರ ತೇರ್ ಮೈದಾನದಲ್ಲಿ ಶನಿವಾರ 210 ಕೆಜಿ ತೂಕ ಮೂಟೆ ಹೊತ್ತು ಸಾಹಸ ಮೆರೆದ ಸಂತೋಷ ನಾಗಪ್ಪ ಜಾಡರ್ ಅವರಿಗೆ ಸನ್ಮಾನಿಸಿ ನಗದು ಬಹುಮಾನ ವಿತರಿಸಲಾಯಿತು   

ಚಿಂಚೋಳಿ: ತಾಲ್ಲೂಕಿನ ಸುಲೇಪೇಟ ಗ್ರಾಮದಲ್ಲಿ ಕಾರಹುಣ್ಣಿಮೆ ಅಂಗವಾಗಿ ಭಾರ ಎತ್ತುವ ಸ್ಪರ್ಧೆ ಶನಿವಾರ ನಡೆಯಿತು.

ಗ್ರಾಮದ ಸಂತೋಷ ನಾಗಪ್ಪ ಜಾಡರ್ ಅವರು 210 ಕೆಜಿ ತೂಕದ ತೊಗರಿ ಧಾನ್ಯಗಳ ಮೂಟೆ ಹೊತ್ತು 110 ಅಡಿ ಹೆಜ್ಜೆ ಹಾಕಿ ಸಾಸಹ ಮೆರೆದರು. ನಿವೃತ್ತ ಶಿಕ್ಷಕ ಜಗನ್ನಾಥರಡ್ಡಿ ಪೊಂಗಾ ಅವರು ₹5ಸಾವಿರ ಬಹುಮಾನ ನೀಡಿ ಸನ್ಮಾನಿಸಿ ಅಭಿನಂದಿಸಿದರು. ಬಳಿಕ ಯುವಕನ ಮೆರವಣಿಗೆ ಮಾಡಲಾಯಿತು.

ಗ್ರಾಮದ ಬಸವೇಶ್ವರ ವೃತ್ತದಲ್ಲಿ ಮುಖಂಡರು ಸಾಹಸಿ ಸಾಧಕನಿಗೆ ಸನ್ಮಾನಿಸಿ ಸಿಹಿ ತಿನ್ನಿಸಿ ಅಭಿನಂದಿಸಿದರು. ಶರಣು ಮೇದಾರ್, ಶರಣು ಸೋಲಾಪುರ, ಶಿವಶರಣಪ್ಪ ಹೂಗಾರ, ಆರೀಫ್ ಪಟೇಲ್, ಸತೀಶ ಮಾದೇಶಿ, ಹಾಫೀಜ್ ಸರದಾರ ಉಪಸ್ಥಿತರಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.