ADVERTISEMENT

ತರಕಸ್ಪೇಟ್: ಮನೆಗೆ ನುಗ್ಗಿದ ಮಳೆ ನೀರು

​ಪ್ರಜಾವಾಣಿ ವಾರ್ತೆ
Published 13 ಜೂನ್ 2024, 15:36 IST
Last Updated 13 ಜೂನ್ 2024, 15:36 IST
ವಾಡಿ ಸಮೀಪದ ರಾಂಪುರಹಳ್ಳಿ ಗ್ರಾ.ಪಂ. ವ್ಯಾಪ್ತಿಯ ತರಕಸ್ಪೇಟ್‌ ಗ್ರಾಮದ ಕೆಲವು ಮನೆಗಳಿಗೆ ಮಳೆ ನೀರು ನುಗ್ಗಿರುವುದು
ವಾಡಿ ಸಮೀಪದ ರಾಂಪುರಹಳ್ಳಿ ಗ್ರಾ.ಪಂ. ವ್ಯಾಪ್ತಿಯ ತರಕಸ್ಪೇಟ್‌ ಗ್ರಾಮದ ಕೆಲವು ಮನೆಗಳಿಗೆ ಮಳೆ ನೀರು ನುಗ್ಗಿರುವುದು   

ವಾಡಿ: ಗುರುವಾರ ಮಧ್ಯಾಹ್ನ ಹಾಗೂ ಸಂಜೆ ಸುರಿದ ಮಳೆಯಿಂದ ಹಲವೆಡೆ ಜನಜೀವನ ಅಸ್ತವ್ಯಸ್ತಗೊಂಡಿತು.

ನಾಲವಾರ ವಲಯದ ತರಕಸ್ಪೇಟ್‌ ಗ್ರಾಮದಲ್ಲಿ ಗುರುವಾರ ಮಧ್ಯಾಹ್ನ ಸುಮಾರು 3 ತಾಸು ಮಳೆ ಸುರಿದ ಕಾರಣ ನೀರು ಹಲವು ಮನೆಗಳಿಗೆ ನುಗ್ಗಿ ದವಸ ಧಾನ್ಯಗಳು ಸಂಪೂರ್ಣ ನೀರು ಪಾಲಾದವು.

ಹನುಮಾನ ದೇವಸ್ಥಾನದ ಹಿಂದಿನ ಬಡಾವಣೆಯಲ್ಲಿ 10 ಮನೆಗಳಿಗೆ ಮಳೆ ನೀರು ನುಗ್ಗಿ ಬಸವರಾಜ ಹಂದರಕಿ ಅವರ ಮನೆಯ ನಾಲ್ಕು ಕ್ವಿಂಟಲ್ ಜೋಳ, ರಾಮಲಿಂಗ ಗಡ್ಡಿಮನಿ ಮನೆಯಲ್ಲಿ ಒಂದು ಕ್ವಿಂಟಲ್ ಸಜ್ಜೆ, ಶಾಂತಪ್ಪ ತಳವಾರ ಅವರ ಮನೆಗಳಿಗೆ ನುಗ್ಗಿದ್ದರಿಂದ ಆರ್ಥಿಕ ಸಂಕಷ್ಟ ಉಂಟಾಗಿದೆ. ಗ್ರಾಮದಲ್ಲಿ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಪ್ರತಿ ವರ್ಷ ಮಳೆ ನೀರು ಮನೆಗಳಿಗೆ ನುಗ್ಗಿ ಅವಾಂತರ ಸೃಷ್ಟಿ ಮಾಡುತ್ತಿದೆ ಎಂದು ಬಡಾವಣೆಯ ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ.

ADVERTISEMENT
ವಾಡಿ ಸಮೀಪದ ರಾಂಪುರಹಳ್ಳಿ ಗ್ರಾ.ಪಂ. ವ್ಯಾಪ್ತಿಯ ತರಕಸ್ಪೇಟ್‌ ಗ್ರಾಮದ ಕೆಲ ಮನೆಗಳಿಗೆ ಮಳೆ ನೀರು ನುಗ್ಗಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.