ADVERTISEMENT

ದಸರಾ ಕುಸ್ತಿಯಲ್ಲಿ ಬೆಳ್ಳಿ ಗೆದ್ದ ದೇವೇಂದ್ರ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2024, 16:11 IST
Last Updated 6 ಅಕ್ಟೋಬರ್ 2024, 16:11 IST
ರಜತ ಪದಕದೊಂದಿಗೆ ಕುಸ್ತಿಪಟು ದೇವೇಂದ್ರ
ರಜತ ಪದಕದೊಂದಿಗೆ ಕುಸ್ತಿಪಟು ದೇವೇಂದ್ರ   

ಕಲಬುರಗಿ: ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ದೇವೇಂದ್ರ ಅವರು ದಸರಾ ಸಿಎಂ ಕಪ್‌ ಕ್ರೀಡಾಕೂಟದ ಕುಸ್ತಿ ಸ್ಪರ್ಧೆಯ ‌57 ಕೆ.ಜಿ. ಫ್ರೀಸ್ಟೈಲ್‌ ವಿಭಾಗದಲ್ಲಿ ದೇವೇಂದ್ರ ರಜತ ಪದಕಕ್ಕೆ ಮುತ್ತಿಕ್ಕಿದ್ದಾರೆ.

ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಫೈನಲ್‌ನಲ್ಲಿ ಬೆಳಗಾವಿ ವಿಭಾಗದ ಕುಸ್ತಿಪಟು ವಿರುದ್ಧ ದೇವೇಂದ್ರ 2–5 ಅಂಕಗಳಿಂದ ಪರಾಭವಗೊಂಡರು. ಈ ಹಣಾಹಣಿ ಸುಮಾರು 4 ನಿಮಿಷ ನಡೆಯಿತು.

ಕಳೆದ ಐದಾರು ವರ್ಷಗಳಿಂದ ಕುಸ್ತಿ ಅಭ್ಯಾಸ ನಡೆಸುತ್ತಿರುವ ದೇವೇಂದ್ರ ಅವರು ಮುಂಬೈಯಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಾರೆ. ಸಮಯ ಸಿಕ್ಕಾಗ ಅಖಾಡದಲ್ಲಿ ಕುಸ್ತಿ ಅಭ್ಯಾಸ ನಡೆಸುತ್ತಾರೆ.

ADVERTISEMENT

ದೇವೇಂದ್ರ ಅವರು ಭೀಮಣ್ಣ ಹಾಗೂ ಯಲ್ಲಮ್ಮ ದಂಪತಿಯ ಕಿರಿಯ ಪುತ್ರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.