ADVERTISEMENT

ಹಣ ದುಪ್ಪಟು ಆಮಿಷ: ಸಹೋದರಿಯರಿಗೆ ₹20 ಲಕ್ಷ ವಂಚನೆ

​ಪ್ರಜಾವಾಣಿ ವಾರ್ತೆ
Published 26 ಜೂನ್ 2024, 16:28 IST
Last Updated 26 ಜೂನ್ 2024, 16:28 IST
<div class="paragraphs"><p>(ಪ್ರಾತಿನಿಧಿಕ ಚಿತ್ರ)</p></div>

(ಪ್ರಾತಿನಿಧಿಕ ಚಿತ್ರ)

   

ಕಲಬುರಗಿ: ಕ್ವೆಸ್ಟ್ ಕ್ಯಾಪಿಟಲ್ ಟ್ರೇಡಿಂಗ್‌ನಲ್ಲಿ ಹೂಡಿಕೆ ಮಾಡಿದರೆ ಹಣ ದುಪ್ಪಟಾಗುತ್ತದೆ ಎಂದು ನಂಬಿಸಿ, ಸಹೋದರಿಯರಿಂದ ₹20 ಲಕ್ಷ ಪಡೆದು ವಂಚಿಸಿದ ಪ್ರಕರಣ ಸೈಬರ್, ಆರ್ಥಿಕ ಮತ್ತು ಮಾದಕವಸ್ತು ತಡೆ (ಸೆನ್) ಠಾಣೆಯಲ್ಲಿ ಠಾಣೆಯಲ್ಲಿ ದಾಖಲಾಗಿದೆ.

ಖಾಸಗಿ ಬ್ಯಾಂಕ್ ಉದ್ಯೋಗಿ ಪೂರ್ಣಿಮಾ ನಾರಾಯಣರಾವ ಮತ್ತು ಕರುಣೇಶ್ವರ ನಗರದ ಪ್ರತಿಮಾ ಜಾಗಿರದಾರ್ ಹಣ ಕಳೆದುಕೊಂಡವರು. ಹುಬ್ಬಳ್ಳಿ ಮೂಲದ ಹಣಮಂತ ಕೊಳ್ಳುರ ವಂಚನೆ ಮಾಡಿರುವ ಆರೋಪಿ.

ADVERTISEMENT

ಟ್ರೇಡಿಂಗ್ ತರಬೇತಿ ವೇಳೆ ಪರಿಚಯವಾದ ಹಣಮಂತ, ಹಣ ದುಪ್ಪಟು ಮಾಡಿಕೊಡುವುದಾಗಿ ನಂಬಿಸಿ ಇವರಿಬ್ಬರಿಂದ ತಲಾ ₹10 ಲಕ್ಷ (ಒಟ್ಟು ₹20 ಲಕ್ಷ) ಪಡೆದಿದ್ದರು. ಹೂಡಿಕೆಯ ಹಣ ವಾಪಸ್‌ ಕೊಡದೆ ಹಣಮಂತ ವಂಚಿಸಿದ್ದಾರೆ ಎಂದು ಆರೋಪಿಸಿ ಪೂರ್ಣಿಮಾ ದೂರು ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.