ಕಲಬುರಗಿ: ನೆಹರು ಗಂಜ್ ಪ್ರದೇಶದಲ್ಲಿನ ನಗರೇಶ್ವರ ಶಾಲೆಯಲ್ಲಿ ಕರ್ನಾಟಕ ಆರ್ಯವೈಶ್ಯ ಮಹಾಸಭಾ ಕಲಬುರಗಿ ಜಿಲ್ಲಾ ಮಹಿಳಾ ಸಬಲೀಕರಣ ಘಟಕವನ್ನು ಆರ್ಯವೈಶ್ಯ ಸಮಾಜದ ಅಧ್ಯಕ್ಷ ರಾಘವೇಂದ್ರ ಮೈಲಾಪುರ ಉದ್ಘಾಟಿಸಿದರು.
ಕರ್ನಾಟಕ ಆರ್ಯವೈಶ್ಯ ಮಹಾಸಭಾದ ವಿಭಾಗೀಯ ಕಾರ್ಯದರ್ಶಿ ವೀರೇಶ ವಾಗಣಗೇರಿ, ಜಿಲ್ಲಾ ಸಮಿತಿ ಉಪಾಧ್ಯಕ್ಷ ಮಲ್ಲಿಕಾರ್ಜುನ ಗಂಗಾ, ವಾಸವಿ ಮಹಿಳಾ ಮಂಡಲ ಅಧ್ಯಕ್ಷೆ ಶೈಲಜಾ ಮದರಗಾಂವ, ವಾಸವಿ ಯುವತಿ ಮಂಡಲ ಅಧ್ಯಕ್ಷೆ ನೀತಾ ವಿ. ಮಾದಮಶೆಟ್ಟಿ, ವಾಸವಿ ಯುವಜನ ಸಂಘ ಅಧ್ಯಕ್ಷ ವಿನಯ ಚಿಕಟವಾರ, ರಾಜ್ಯ ಸಮಿತಿ ನಿರ್ದೇಶಕಿ ಗೀತಾ ಆರ್.ಗಂಪಾ, ಜಿಲ್ಲಾ ಸಬಲೀಕರಣ ಘಟಕದ ಅಧ್ಯಕ್ಷೆ ಆರತಿ ತಾವರಗೇರಾ, ಖಜಾಂಚಿ ವೈಭವಿ ಕಲಕೋಟೆ, ಸದಸ್ಯರಾದ ಲಕ್ಷ್ಮಿ ಸುರಪುರ, ರಾಧಿಕಾ ಇಟಗಂಪಲ್ಲಿ, ಉಮಾ ಅತನೂರ, ಸಂಗೀತಾ ಎಸ್.ಜಿ., ಸವಿತಾ ಗಾದಾ, ಶಾರದಾ ಪಾರಸ್ವರ, ಸ್ವಾತಿ ಕೋಟೂರ, ವಿದ್ಯಾ ಬುದ್ದಾ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.