ADVERTISEMENT

ಸೇಡಂ: ಮನೆಯ ಮಾಳಿಗೆ ಕುಸಿದು ಬಿದ್ದು ವ್ಯಕ್ತಿ ಸಾವು

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2024, 4:41 IST
Last Updated 23 ಸೆಪ್ಟೆಂಬರ್ 2024, 4:41 IST
<div class="paragraphs"><p>ರಾಜೇಂದ್ರ ಬಸವಂತರಾವ</p></div>

ರಾಜೇಂದ್ರ ಬಸವಂತರಾವ

   

ಸೇಡಂ (ಕಲಬುರಗಿ ಜಿಲ್ಲೆ): ಮನೆ ಮಾಳಿಗೆ ಕುಸಿದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ತಾಲ್ಲೂಕಿನ ಕುರಕುಂಟಾ ಗ್ರಾಮದಲ್ಲಿ ಸೋಮವಾರ ‌ನಡೆದಿದೆ.

ತಾಲ್ಲೂಕಿನ ರಾಜೋಳಿ ಗ್ರಾಮದ ರಾಜೇಂದ್ರ ಬಸವಂತರಾವ (62) ಮೃತರು. ಕುರಕುಂಟಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ADVERTISEMENT

ರಾಜೇಂದ್ರ ಅವರು ಮಗಳನ್ನು ಮಾತನಾಡಿಸಲು ರಾಜೋಳಿ ಗ್ರಾಮದಿಂದ ಕುರಕುಂಟಾ ಗ್ರಾಮಕ್ಕೆ ಬಂದಿದ್ದರು. ಮಗಳ ಮನೆಯಲ್ಲಿ ತಂಗಿದ್ದು, ರಾತ್ರಿ ಮನೆಯಲ್ಲಿ ಮಲಗಿದ್ದಾಗ ಮಾಳಿಗೆ ಕುಸಿದು ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಮನೆಯ ಸುತ್ತಲೂ ಜನ ನೆರೆದಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.