ADVERTISEMENT

ಕಲಬುರಗಿ: 12 ವರ್ಷಗಳ ಬಳಿಕ ಗ್ರಾಮಕ್ಕೆ ವಾಪಸಾದ ವ್ಯಕ್ತಿ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2023, 3:04 IST
Last Updated 19 ಫೆಬ್ರುವರಿ 2023, 3:04 IST
ಲಾಡಚಿಂಚೋಳಿಯಿಂದ ಕಾಣೆಯಾಗಿ ಕೇರಳಕ್ಕೆ ತೆರಳಿದ್ದ ಚಂದ್ರಕಾಂತ ಅವರನ್ನು ಕೊಲ್ಲಂನ ಸ್ವಯಂಸೇವಾ ಸಂಸ್ಥೆಯವರು ನರೋಣಾ ಪೊಲೀಸರ ಸಮ್ಮುಖದಲ್ಲಿ ಕುಟುಂಬದವರಿಗೆ ಒಪ್ಪಿಸಿದರು
ಲಾಡಚಿಂಚೋಳಿಯಿಂದ ಕಾಣೆಯಾಗಿ ಕೇರಳಕ್ಕೆ ತೆರಳಿದ್ದ ಚಂದ್ರಕಾಂತ ಅವರನ್ನು ಕೊಲ್ಲಂನ ಸ್ವಯಂಸೇವಾ ಸಂಸ್ಥೆಯವರು ನರೋಣಾ ಪೊಲೀಸರ ಸಮ್ಮುಖದಲ್ಲಿ ಕುಟುಂಬದವರಿಗೆ ಒಪ್ಪಿಸಿದರು   

ಕಲಬುರಗಿ: ಹನ್ನೆರಡು ವರ್ಷಗಳ ಹಿಂದೆ ಲಾಡ ಚಿಂಚೋಳಿ ಗ್ರಾಮದಿಂದ ಕಾಣೆಯಾಗಿದ್ದ ಚಂದ್ರಕಾಂತ ಕಲವಾಣಿ ಹರವಾಳ (45) ಎಂಬುವವರನ್ನು ಕೇರಳದ ಕೊಲ್ಲಂನ ಪಠಣಪುರಂನ ಗಾಂಧಿಭವನ ಸ್ವಯಂ ಸೇವಾ ಸಂಸ್ಥೆಯು ಪತ್ತೆ ಹಚ್ಚಿ ಕರೆತಂದಿದೆ.

ಚಂದ್ರಕಾಂತ ಅವರು ಕೊಲ್ಲಂನ ರಸ್ತೆಯಲ್ಲಿ ಅಸ್ವಸ್ಥಗೊಂಡಿದ್ದನ್ನು ಪತ್ತೆ ಹಚ್ಚಿದ ಪೊಲೀಸರು ಅವರನ್ನು ನಿರಾಶ್ರಿತರ ಕೇಂದ್ರಕ್ಕೆ ದಾಖಲಿಸಿದ್ದರು. ಅವರ ಬಗ್ಗೆ ಮಾಹಿತಿ ಪಡೆದ ಗಾಂಧಿನಗರ ಸಂಸ್ಥೆಯವರು ಕೌನ್ಸೆಲಿಂಗ್ ನಡೆಸಿ ಅವರ ವಿಳಾಸವನ್ನು ಪತ್ತೆ ಹಚ್ಚಿದರು.

ಕೇರಳದಿಂದ ಬಂದ ತಂಡದವರು ನರೋಣಾ ಪೊಲೀಸರ ಸಮ್ಮುಖದಲ್ಲಿ ಚಂದ್ರಕಾಂತ ಅವರ ಪತ್ನಿ ಗುರುಬಾಯಿ ಅವರಿಗೆ ಒಪ್ಪಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.