ಮುದಗಲ್: ಇಲ್ಲಿಗೆ ಸಮೀಪದ ಸಜ್ಜಲಗುಡ್ಡದ ಮಠದ ಉಚಿತ ಪ್ರಸಾದ ನಿಲಯದ ವಿದ್ಯಾರ್ಥಿಗಳಿಗೆ ನಾಗರಾಳ ಹೈದರಾಬಾದ್ ಬಾಬುರಾವ ಶಾಸ್ತ್ರಿ ಅವರು ಸಮವಸ್ತ್ರ ಹಾಗೂ ಬೆಡ್ಶೀಟ್ಗಳನ್ನು ಕೊಡುಗೆಯಾಗಿ ನೀಡಿದರು.
ನಂತರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಬಾಬುರಾವ ಶಾಸ್ತ್ರಿ, ‘ಶ್ರೀಮಠವು ಬಡ ವಿದ್ಯಾರ್ಥಿಗಳಿಗೆ ಅನೇಕ ದಶಕಗಳಿಂದ ಉಚಿತ ಅನ್ನ–ಜ್ಞಾನ ಎರಡೂ ದಾಸೋಹ ನೀಡುತ್ತ ಬರುತ್ತಿದೆ. ಈ ಭಾಗದ ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಿದೆ. ಬಡ ಮಕ್ಕಳಿಗೆ ಅನ್ನ–ಜ್ಞಾನ ಎರಡೂ ದಾಸೋಹದ ಮೂಲಕ ಶೈಕ್ಷಣಿಕ ಕ್ರಾಂತಿ ಮಾಡಿದ ಮಠವಾಗಿದೆ’ ಎಂದರು.
ಮಠಾಧ್ಯಕ್ಷ ದೊಡ್ಡ ಬಸವಾರ್ಯ ತಾತನವರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.