ADVERTISEMENT

ಕಲಬುರಗಿ: ಮಂಗಳವಾರ ಕ್ಷೌರ ಅಂಗಡಿ ತೆರೆಯಲು ಮನವಿ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2024, 15:19 IST
Last Updated 7 ಏಪ್ರಿಲ್ 2024, 15:19 IST

ಕಲಬುರಗಿ: ರಂಜಾನ್‌ ಹಬ್ಬದ ಪ್ರಯುಕ್ತ ಸಾರ್ವಜನಿಕರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಮಂಗಳವಾರ (ಏ.9) ಕ್ಷೌರದ ಅಂಗಡಿಗಳನ್ನು ತೆರೆದಿಡಬೇಕು ಎಂದು ಸವಿತಾ ಸಮಾಜದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೂರ್ಯಕಾಂತ ಜಿ.ಬೆಣ್ಣೂರ ತಿಳಿಸಿದ್ದಾರೆ.

ಹಬ್ಬದ ಪ್ರಯುಕ್ತ ಅಂದು ಎಲ್ಲ ಅಂಗಡಿಗಳ ಮಾಲೀಕರು ಕ್ಷೌರದಂಗಡಿ ತೆರೆದು ಸಹಕರಿಸಬೇಕು. ಮುಂದಿನ ವಾರದಿಂದ ಸಮಾಜದ ನಿಯಮದ ಪ್ರಕಾರ ಪ್ರತಿ ಮಂಗಳವಾರ ಬಂದ್‌ ಮಾಡಬೇಕು ಎಂದು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT