ADVERTISEMENT

ರಷ್ಯಾದಲ್ಲಿ ಸಿಲುಕಿದವರು ಶೀಘ್ರ ಸ್ವದೇಶಕ್ಕೆ: ಸಂಸದ ಉಮೇಶ ಜಾಧವ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2024, 16:10 IST
Last Updated 28 ಫೆಬ್ರುವರಿ 2024, 16:10 IST
ಕಲಬುರಗಿಯಲ್ಲಿ ಬುಧವಾರ ಸಂಸದ ಡಾ. ಉಮೇಶ ಜಾಧವ ಅವರು ರಷ್ಯಾದಲ್ಲಿ ಸಿಲುಕಿದ ಯುವಕರ ಕುಟುಂಬಸ್ಥರೊಂದಿಗೆ ಚರ್ಚಿಸಿದರು
ಕಲಬುರಗಿಯಲ್ಲಿ ಬುಧವಾರ ಸಂಸದ ಡಾ. ಉಮೇಶ ಜಾಧವ ಅವರು ರಷ್ಯಾದಲ್ಲಿ ಸಿಲುಕಿದ ಯುವಕರ ಕುಟುಂಬಸ್ಥರೊಂದಿಗೆ ಚರ್ಚಿಸಿದರು   

ಕಲಬುರಗಿ: ಯುದ್ಧ ಪೀಡಿತ ರಷ್ಯಾ- ಉಕ್ರೇನ್ ಗಡಿಯಲ್ಲಿ ಸಿಲುಕಿರುವ ಜಿಲ್ಲೆಯ ಮೂವರು ಸೇರಿ ಒಟ್ಟು ಆರು ಯುವಕರ ಬಿಡುಗಡೆಗೆ ಭಾರತೀಯ ರಾಯಭಾರ ಕಚೇರಿ ಹಾಗೂ ರಷ್ಯಾ ರಾಜತಾಂತ್ರಿಕರ ನಡುವೆ ಮಾತುಕತೆ ಪ್ರಗತಿಯಲ್ಲಿದ್ದು, ಶೀಘ್ರವೇ ಭಾರತೀಯ ಯುವಕರು ತವರಿಗೆ ವಾಪಸಾಗುವರು ಎಂದು ಸಂಸದ ಡಾ. ಉಮೇಶ ಜಾಧವ ಹೇಳಿದರು.

ರಷ್ಯಾದಲ್ಲಿ ಸಿಲುಕಿದ್ದ ಯುವಕರ ಕುಟುಂಬದವರನ್ನು ತಮ್ಮ ಗೃಹ ಕಚೇರಿಗೆ ಕರೆಯಿಸಿಕೊಂಡು ಸಾಂತ್ವನ ಹೇಳಿದ ಜಾಧವ, ವಿದೇಶಾಂಗ ಖಾತೆಯ ಹೆಚ್ಚುವರಿ ಕಾರ್ಯದರ್ಶಿ ಅವರು ರಷ್ಯಾದ ವಿದೇಶಾಂಗ ರಾಜತಾಂತ್ರಿಕ ಅಧಿಕಾರಿಯೊಂದಿಗೆ ಮಾತುಕತೆ ನಡೆಸಿದ್ದಾರೆ. ಬಿಡುಗಡೆ ಪ್ರಕ್ರಿಯೆ ಚುರುಕುಗೊಂಡಿದೆ. ರಷ್ಯಾದ ಅಧಿಕಾರಿಗಳಿಂದ ಉತ್ತಮ ಸ್ಪಂದನೆಯೂ ಸಿಕ್ಕಿದೆ ಎಂ‌ದರು.

ಭಾರತದಲ್ಲಿರುವ ರಷ್ಯಾ ರಾಯಭಾರ ಕಚೇರಿಯ ಜೊತೆ ನಿರಂತರ ಸಂಪರ್ಕ ಇರಿಸಿಕೊಂಡಿದ್ದೇನೆ. ಯಾವುದೇ ಕ್ಷಣದಲ್ಲೂ ಬಿಡುಗಡೆ ಮಾಹಿತಿ ಲಭ್ಯವಾಗಲಿದೆ. ಆತಂಕ ಪಡಬೇಕಾದ ಅವಶ್ಯಕತೆ ಇಲ್ಲ ಎಂದು ಯುವಕರ ಪೋಷಕರಿಗೆ ಭರವಸೆ ನೀಡಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.