ADVERTISEMENT

ಬಾಳೆಕಾಡು: ಅದ್ಧೂರಿ ಶೋಭಾಯಾತ್ರೆ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2024, 5:13 IST
Last Updated 2 ಏಪ್ರಿಲ್ 2024, 5:13 IST
ಸುಂಟಿಕೊಪ್ಪ ಸಮೀಪದ ಬಾಳೆ ಕಾಡು ಚಾಮುಂಡೇಶ್ವರಿ ಮತ್ತು ಮುತ್ತಪ್ಪ ಸೇವಾ ಸಮಿತಿಯಿಂದ ಮುತ್ತಪ್ಪ ತೆರೆ ಮಹೋತ್ಸವದ ಅಂಗವಾಗಿ ವಿದ್ಯುತ್ ದೀಪಾಲಂಕೃತ ಮಂಟಪದ ಮೆರವಣಿಗೆ ಭಾನುವಾರ ರಾತ್ರಿ ನಡೆಯಿತು
ಸುಂಟಿಕೊಪ್ಪ ಸಮೀಪದ ಬಾಳೆ ಕಾಡು ಚಾಮುಂಡೇಶ್ವರಿ ಮತ್ತು ಮುತ್ತಪ್ಪ ಸೇವಾ ಸಮಿತಿಯಿಂದ ಮುತ್ತಪ್ಪ ತೆರೆ ಮಹೋತ್ಸವದ ಅಂಗವಾಗಿ ವಿದ್ಯುತ್ ದೀಪಾಲಂಕೃತ ಮಂಟಪದ ಮೆರವಣಿಗೆ ಭಾನುವಾರ ರಾತ್ರಿ ನಡೆಯಿತು   

ಸುಂಟಿಕೊಪ್ಪ: ಸಮೀಪದ ಬಾಳೆಕಾಡು ಚಾಮುಂಡೇಶ್ವರಿ ಮತ್ತು ಮುತ್ತಪ್ಪ ಸೇವಾ ಸಮಿತಿಯಿಂದ 59ನೇ ವರ್ಷದ ಮುತ್ತಪ್ಪ ತೆರೆ ಮಹೋತ್ಸವದ ಅಂಗವಾಗಿ ವೈಭವಯುತ ಶೋಭಾಯಾತ್ರೆ ಭಾನುವಾರ ರಾತ್ರಿ ನಡೆಯಿತು.

ತೆರೆ ಮಹೋತ್ಸವದ ಅಂಗವಾಗಿ ಪೈಂಗುತ್ತಿ ಪೂಜೆ, ಅಲಂಕಾರ ಪೂಜೆ ನಡೆಯಿತು.

ಸಂಜೆ ಬಾಳೆಕಾಡುವಿನ ತೋಟದ ದೇವಾಲಯದಿಂದ‌ ಕೇರಳದ 40 ಅಡಿ ಎತ್ತರದ ಬೃಹತ್ ವಿದ್ಯುತ್ ದೀಪ ಅಲಂಕೃತ ಆಕರ್ಷಣೀಯ ಮಂಟಪದಲ್ಲಿ ಮುತ್ತಪ್ಪ, ತಿರುವಪ್ಪ ಉತ್ಸವ ಮೂರ್ತಿ ಮತ್ತು ಚಾಮುಂಡೇಶ್ವರಿ ದೇವಿಯ ಟ್ಯಾಬ್ಲೋದ ಭವ್ಯ ಮೆರವಣಿಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗಿತು. ಅದರೊಂದಿಗೆ ಆಕರ್ಷಕವಾದ ಬ್ರಹ್ಮ, ಶಿವ, ಲಕ್ಷ್ಮಿ, ದುರ್ಗೆ, ಚಾಮುಂಡಿ, ಸರಸ್ವತಿ, ವಿಷ್ಣು ಸೇರಿದಂತೆ ಹಲವು ವೇಷಪಲ್ಲಟಣೆಯು ಮನಸೂರೆಗೊಂಡವು.

ADVERTISEMENT

ಇದರೊಂದಿಗೆ ವಾದ್ಯಮೇಳ, ನಗಾರಿ, ಡಿಜೆ, ಕೇರಳದ ಸಿಂಗಾರಿ ಮೇಳಕ್ಕೆ ಮಕ್ಕಳು, ಮಹಿಳೆಯರು, ಯುವಕರು, ಯುವತಿಯರು ಹೆಜ್ಜೆ ಹಾಕಿ ಸಂಭ್ರಮಿಸಿದರು.

ಆಕರ್ಷಕವಾದ ಮೆರವಣಿಗೆಗೆಯನ್ನು ವೀಕ್ಷಿಸಲು ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಎರಡು ಬದಿಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ವೀಕ್ಷಿಸಿದರು.

ಪಟ್ಟಣದ ಕನ್ನಡ ವೃತ್ತದಲ್ಲಿ ಈ ಮೆರವಣಿಗೆ ಆಗಮಿಸಿದ ಸಂದರ್ಭ ಸುಂಟಿಕೊಪ್ಪದಲ್ಲಿ ನಡೆಯುತ್ತಿದ್ದ ಮುತ್ತಪ್ಪ ತೆರೆ ಮಹೋತ್ಸವದ ದೈವದಲ್ಲಿ ಒಂದಾದ ವಸೂರಿಮಲೆಯ ಸ್ಚಾಗತಕ್ಕೆ ಸಿಡಿಲಬ್ಬರದ ಪಟಾಕಿ ಮತ್ತು ಬಾನಂಚಿನಲ್ಲಿ ಬಣ್ಣಬಣ್ಣದ ಪಟಾಕಿಯ ಚಿತ್ತಾರ ಇನ್ನಷ್ಟು ಆಕರ್ಷಿಸಿತು.

ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ದಟ್ಟಣೆ ಹೆಚ್ಚಾಗಿದ್ದರೂ ಸಮಿತಿಯ ಸದಸ್ಯರು ವಾಹನ ಸವಾರರಿಗೆ ತೊಂದರೆಯಾಗದಂತೆ ಸುಗಮ ಸಂಚಾರಕ್ಕೆ ಪೊಲೀಸರದೊಂದಿಗೆ ಕೈಜೋಡಿಸಿದರು.

ಮೆರವಣಿಗೆಯಲ್ಲಿ ಮುತ್ತಪ್ಪ ಮತ್ತು ತಿರುವಪ್ಪ ದೇವರ ಸ್ತಬ್ಥಚಿತ್ರ ಅದರೊಂದಿಗೆ ಐದು ಬಣ್ಣಬಣ್ಣದ ಕಳಶದ ಮೆರವಣಿಗೆಯೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ‌ ಸಾಗಿ ನಂತರ‌ ಸುಂಟಿಕೊಪ್ಪ ಚಾಮುಂಡೇಶ್ವರಿ ಮತ್ತು ಮುತ್ತಪ್ಪ ದೇವಾಲಯದಲ್ಲಿ ಕಳಸ ಪೂಜೆ ನಡೆಸಿ ದೇವಾಲಯದಲ್ಲಿ ಹರಕೆ ಸಮರ್ಪಿಸಿ ಕೊನೆಯಲ್ಲಿ ಮನಮೋಹಕ ಚಂಡೆವಾದ್ಯದೊಂದಿಗೆ ಕಾರ್ಯಕ್ರಮ ಸಮಾಪ್ತಿಗೊಂಡಿತು.

ನೆರೆದಿದ್ದ ಭಕ್ತರಿಗೆ ಬಾಳೆಕಾಡು ತೋಟದ ದೇವಾಲಯದ ಆವರಣದಲ್ಲಿ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

ಸಮಿತಿ ಅಧ್ಯಕ್ಷ ಸಂದೀಪ್, ಕಾರ್ಯದರ್ಶಿ ಹರೀಶ್, ಖಜಾಂಚಿ ಸತೀಶ್, ಪದಾಧಿಕಾರಿಗಳಾದ ಮೋಹನ್, ಅಭಿ, ಸಚಿನ್, ಪ್ರಶಾಂತ್ ಸಂಜು, ರಾಜೇಶ್, ಪ್ರವೀಣ್, ಪ್ರಕಾಶ್ ಸೇರಿದಂತೆ, ಬಾಳೆಕಾಡು ತೋಟದ ಕಾರ್ಮಿಕರು, ಸಾರ್ವಜನಿಕರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

ತೆರೆ ಮಹೋತ್ಸವದ ಅಂಗವಾಗಿ ಶೋಭಾಯಾತ್ರೆ ಮನರಂಜಿಸಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.