ADVERTISEMENT

ನಾಪೋಕ್ಲು | ಮರ ತೆರವುಗೊಳಿಸಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 19 ಜೂನ್ 2024, 6:25 IST
Last Updated 19 ಜೂನ್ 2024, 6:25 IST
ನಾಪೋಕ್ಲು - ವಿರಾಜಪೇಟೆ ಮುಖ್ಯರಸ್ತೆಯ ಕಬ್ಬಿನ ಕಾಡು ಎಂಬಲ್ಲಿ ಬೃಹತ್ ಮರವೊಂದು ಮುರಿದು ರಸ್ತೆಗೆ ಬಿದ್ದಿರುವುದು
ನಾಪೋಕ್ಲು - ವಿರಾಜಪೇಟೆ ಮುಖ್ಯರಸ್ತೆಯ ಕಬ್ಬಿನ ಕಾಡು ಎಂಬಲ್ಲಿ ಬೃಹತ್ ಮರವೊಂದು ಮುರಿದು ರಸ್ತೆಗೆ ಬಿದ್ದಿರುವುದು   

ನಾಪೋಕ್ಲು: ಹೋಬಳಿ ವ್ಯಾಪ್ತಿಯಲ್ಲಿ ಕೆಲವು ದಿನಗಳಿಂದ ಬಿಡುವು ಕೊಟ್ಟಿದ್ದ ಮಳೆ ಮಂಗಳವಾರ ಮಧ್ಯಾಹ್ನದಿಂದ ನಿರಂತರವಾಗಿ ಸುರಿಯಿತು.

ಪಟ್ಟಣ ಸೇರಿದಂತೆ ಮೂರ್ನಾಡು, ಬಲಮುರಿ, ಪಾರಾಣೆ, ಕಕ್ಕಬ್ಬೆ ವ್ಯಾಪ್ತಿಯಲ್ಲಿ ಮಳೆಯಾಗಿದೆ. ನಾಪೋಕ್ಲು- ವಿರಾಜಪೇಟೆ ಮುಖ್ಯರಸ್ತೆಯ ಕಬ್ಬಿನ ಕಾಡು ಎಂಬಲ್ಲಿ ಬೃಹತ್ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದಿದೆ. ಇಲ್ಲಿ ಅಲ್ಲಲ್ಲಿ ರಸ್ತೆ ತಿರುವುಗಳಿದ್ದು ಮರ ಬಿದ್ದಿರುವುದರಿಂದ ವಾಹನ ಸಂಚಾರ ಕಷ್ಟವಾಗಿದೆ. ರಸ್ತೆಯ ಒಂದು ಬದಿಯಲ್ಲಿ ಚರಂಡಿಯೂ ಇದ್ದು ಇದೆ. ಕೂಡಲೇ ಮರವನ್ನು ತೆರವುಗೊಳಿಸಿ ಸಂಚಾರಕ್ಡಕೆ ಅನುವು ಮಾಡಿ ಕೊಡಿ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT