ADVERTISEMENT

ಸಿದ್ದಾಪುರ: ಮುಂದುವರಿದ ಕಾಡಾನೆ ಉಪಟಳ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2023, 4:57 IST
Last Updated 1 ಡಿಸೆಂಬರ್ 2023, 4:57 IST
ಕಾಡಾನೆ ದಾಳಿಯಿಂದ ಫಸಲಿನೊಂದಿಗೆ ನಾಶವಾಗಿರುವ ಅಡಿಕೆ ಮರ
ಕಾಡಾನೆ ದಾಳಿಯಿಂದ ಫಸಲಿನೊಂದಿಗೆ ನಾಶವಾಗಿರುವ ಅಡಿಕೆ ಮರ   

ಸಿದ್ದಾಪುರ: ಕರಡಿಗೋಡು ಗ್ರಾಮದಲ್ಲಿ ಕಾಡಾನೆ ಉಪಟಳ ಮುಂದುವರಿದಿದ್ದು, ಬುಧವಾರ ರಾತ್ರಿಯೂ ಕಾಡಾನೆ ದಾಳಿಗೆ ಕೃಷಿ ಫಸಲು ನಾಶವಾಗಿದೆ.

ಗ್ರಾಮದ ಕಂಬೀರಂಡ ಗಣಪತಿ ಅವರ ಕಾಫಿ ತೋಟಕ್ಕೆ ಲಗ್ಗೆ ಇಟ್ಟಿರುವ ಕಾಡಾನೆ ಹಿಂಡು ತೋಟದ ಕಾಫಿ ಗಿಡಗಳನ್ನು ನಾಶಮಾಡಿದೆ. ಫಸಲಿಗೆ ಬಂದಿದ್ದ ಅಡಿಕೆ ಮರಗಳನ್ನು ಬೀಳಿಸಿದ್ದು, ಅಪಾರ ಹಾನಿಯಾಗಿದೆ. ಕಳೆದ ಕೆಲವು ದಿನಗಳಿಂದ ಕರಡಿಗೋಡು ಗ್ರಾಮದಲ್ಲಿ ಕಾಡಾನೆ ಉಪಟಳ ಮಿತಿಮೀರಿದ್ದು, ರೈತರು ಕಂಗಾಲಾಗಿದ್ದಾರೆ.

ಮಂಗಳವಾರ ಸಂಜೆ ವೇಳೆ ಗ್ರಾಮದ ಸಾಜನ್ ಎಂಬುವವರು ಮನೆಯ ಸಮೀಪದಲ್ಲೇ ಇದ್ದು, ಕಾಡಾನೆ ದಾಳಿಗೆ ಮುಂದಾಗಿದೆ. ಈ ವೇಳೆ ಸಾಜನ್ ಓಡಿದ್ದು, ಕಾಲಿಗೆ ಗಾಯವಾಗಿದೆ. ಅರಣ್ಯ ಇಲಾಖೆ ಕಾಡಾನೆಗಳನ್ನು ಕಾಡಿಗೆ ಅಟ್ಟುವಲ್ಲಿ ಮುತುವರ್ಜಿ ವಹಿಸುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.