ಗೋಣಿಕೊಪ್ಪಲು: ಪೊನ್ನಂಪೇಟೆ ಸಮೀಪದ ಮತ್ತೂರು ಗ್ರಾಮದ ಚೀಪೆ ಕೊಲ್ಲಿಯ ಚೆಪ್ಪುಡಿರ ನಟೇಶ ಎಂಬುವರ ತೋಟದಲ್ಲಿ ಮಂಗಳವಾರ 6ಕ್ಕೂ ಹೆಚ್ಚು ಕಾಡಾನೆಗಳು ಗೋಚರಿಸಿವೆ.
ತೋಟಕ್ಕೆ ತೆರಳಿದ ನಟೇಶ್ ಅವರ ಕಣ್ಣಿಗೆ ಕಾಡಾನೆಗಳ ಹಿಂಡು ಕಾಫಿ ತೋಟದಲ್ಲಿ ಸುಳಿದಾಡುತ್ತಿರುವುದು ಕಂಡು ಬಂದಿದೆ. ಇದರಿಂದ ಭಯಗೊಂಡ ನಟೇಶ್ ಅರಣ್ಯ ಇಲಾಖೆಗೆ ವಿಷಯ ತಿಳಿಸಿದ್ದಾರೆ.
ನಟೇಶ್ ಅವರ ಕಾಫಿ ತೋಟದ ಗೇಟನ್ನು ಮುರಿದು ಹಾನಿಗೊಳಿಸಿವೆ. ಆನೆಗಳು ತೋಟದಲ್ಲಿ ಬೀಡು ಬಿಟ್ಟಿದ್ದು ಅವುಗಳನ್ನು ಅರಣ್ಯಕ್ಕೆ ಅಟ್ಟುವ ಕಾರ್ಯಾಚರಣೆ ನಡೆಸಲಾಗುವುದು ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.