ADVERTISEMENT

ಹನಫಿ ಜಾಮಿಯಾ ಮಸೀದಿ ಷಾವಲಿ ಉರೂಸ್

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2024, 4:05 IST
Last Updated 2 ಮಾರ್ಚ್ 2024, 4:05 IST
ಸೋಮವಾರಪೇಟೆ:ಪಟ್ಟಣದ ಹನಫಿ ಜಾಮಿಯಾ ಮಸೀದಿಯ ಹಝ್ರತ್ ಮಸ್ತಾನ್ ಮಲಂಗ್ ಷಾವಲಿ ಉರೂಸ್‌ನಲ್ಲಿ  ರಾಮನಗರದ ತಂಡದಿಂದ ಆಕರ್ಷಕ ದಫ್ ನಡೆಯಿತು
ಸೋಮವಾರಪೇಟೆ:ಪಟ್ಟಣದ ಹನಫಿ ಜಾಮಿಯಾ ಮಸೀದಿಯ ಹಝ್ರತ್ ಮಸ್ತಾನ್ ಮಲಂಗ್ ಷಾವಲಿ ಉರೂಸ್‌ನಲ್ಲಿ  ರಾಮನಗರದ ತಂಡದಿಂದ ಆಕರ್ಷಕ ದಫ್ ನಡೆಯಿತು   

ಸೋಮವಾರಪೇಟೆ: ಪಟ್ಟಣದ ಹನಫಿ ಜಾಮಿಯಾ ಮಸೀದಿಯ ಹಝ್ರತ್ ಮಸ್ತಾನ್ ಮಲಂಗ್ ಷಾವಲಿ ಉರೂಸ್ ಶುಕ್ರವಾರ ನಡೆಯಿತು.

ಮಸೀದಿಯಲ್ಲಿ ಸಂಜೆ ಗಂಧ ಮಹೋತ್ಸವ ನಡೆದು, ಮಹಿಳಾ ಸಮಾಜದ ಬಳಿಯ ಜಾಮಿಯಾ ಮಸೀದಿಯಿಂದ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಪ್ರಾರಂಭವಾಗಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಾಗಿತು. ಸ್ಥಳೀಯ ಯುವಕರು ಹಾಗೂ ರಾಮನಗರದ ತಂಡದಿಂದ ಆಕರ್ಷಕ ದಫ್ ನಡೆಯಿತು. ಫಕೀರರ ಝರಬ್ ಮೆರವಣಿಗೆಯಲ್ಲಿ ಸಾಗಿದರು.

ಧಾರ್ಮಿಕ ಪ್ರವಚನ ಸೋಮವಾರಪೇಟೆ ಹನಫಿ ಜಾಮಿಯಾ ಮಸೀದಿಯ ಖತೀಬರಾದ ಆಝಂ ರಝಾ ನಡೆಸಿದರು. ಕಾಜೂರ್ ಹುಲ್ಲೇಹಳ್ಳಿ ಹಝ್ರತ್ ನ ಶಂಸುದ್ದೀನ್ ಝರ್ರಿ, ಮೈಸೂರಿನ ಯಾಸೀರ್ ಅಖ್ತಾರಿ ಅವರು ಪ್ರವಚನ ನೀಡಿದರು. ಸಾರ್ವಜನಿಕರಿಗೆ ಮಸೀದಿಯಲ್ಲಿ ಅನ್ನದಾನ ನಡೆಯಿತು.

ADVERTISEMENT

ಕಾರ್ಯಕ್ರಮದಲ್ಲಿ ಮಸೀದಿಯ ಆಡಳಿತ ಮಂಡಳಿ ಅಧ್ಯಕ್ಷ ಬಷೀರ್, ಉಪಾಧ್ಯಕ್ಷ ರಹಿಂ ಬೇಗ್, ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಶಫಿ, ಖಜಾಂಚಿ ಇನಾಯತ್ ಖಾನ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.