ಗೋಣಿಕೊಪ್ಪಲು: ಪೊನ್ನಂಪೇಟೆ ರಾಮಕೃಷ್ಣ ಶಾರದಾಶ್ರಮದಲ್ಲಿ ಮೈಸೂರಿನ ವಿವೇಕ ಫೌಂಡೇಷನ್ ಸಹಯೋಗದೊಂದಿಗೆ ಉಚಿತ ಮಾನಸಿಕ ಆರೋಗ್ಯ, ಮರೆವಿನ ಕಾಯಿಲೆ, ವ್ಯಸನ ಹಾಗೂ ಇತರ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.
ಶಿಬಿರದಲ್ಲಿ 100 ಕ್ಕೂ ಹೆಚ್ಚುಮಂದಿ ತಪಾಸಣೆ ನಡೆಸಿಕೊಂಡರು. ಮೈಸೂರಿನ ಆರೋಗ್ಯ ತಜ್ಞರು ತಪಾಸಣೆಯಲ್ಲಿ ಪಾಲ್ಗೊಂಡಿದ್ದರು.
ಕಾರ್ಯಕ್ರಮ ಉದ್ಘಾಟಿಸಿದ ರಾಮಕೃಷ್ಣ ಶಾರದಾಶ್ರಮದ ಅಧ್ಯಕ್ಷ ಪರಹಿತಾನಂದ ಸ್ವಾಮೀಜಿ, ‘ಮನುಷ್ಯನಿಗೆ ದೈಹಿಕ ಮತ್ತು ಮಾನಸಿಕ ಆರೋಗ್ಯ ಬಹಳ ಮುಖ್ಯ. ತಜ್ಞರು ಬಂದು ಉಚಿತವಾಗಿ ನಡೆಸುವ ಶಿಬಿರದಲ್ಲಿ ಅಗತ್ಯವಿರುವವರು ತಪಾಸಣೆ ನಡೆಸಿಕೊಳ್ಳಬೇಕು. ಮುಂದೆ ಪ್ರತಿ ತಿಂಗಳ 4ನೇ ಶನಿವಾರ ಶಿಬಿರ ನಡೆಸಲಾಗುವುದು’ ಎಂದು ತಿಳಿಸಿದರು.
ರಾಮಕೃಷ್ಣ ಶಾರದಾಶ್ರಮ ಸೇವಾ ಆಸ್ಪತ್ರೆಯ ಮುಖ್ಯಸ್ಥ ಡಾ.ಕಾರ್ಯಪ್ಪ, ವಿವೇಕ ಆಸ್ಪತ್ರೆಯ ಮನೋವೈದ್ಯ ಸುಹಾಸ್ ಭಾರ್ಗವ್, ಮನೋವಿಜ್ಞಾನಿ ಕುಮಾರ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.