ಮೈಸೂರು: ಮೈಸೂರು ಭಾಗದ ಕೊಡಗು ಹಾಗೂ ಹಾಸನ ಜಿಲ್ಲೆಯಲ್ಲಿ ಶನಿವಾರ ಭಾರಿ ಮಳೆ ಸುರಿದಿದೆ. ಮೈಸೂರು, ಚಾಮರಾಜನಗರದಲ್ಲಿ ಸಾಧಾರಣ ಮಳೆಯಾಗಿದೆ.
ಕೊಡಗು ಜಿಲ್ಲೆಯ ಕುಶಾಲನಗರ ತಾಲ್ಲೂಕಿನ ವಾಲ್ನೂರು ತ್ಯಾಗತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 7 ಸೆಂ.ಮೀ, ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ 6.8 ಸೆಂ.ಮೀ, ಹೊಳೆನರಸೀಪುರದಲ್ಲಿ 6.1 ಸೆಂ.ಮೀ, ನುಗ್ಗೇಹಳ್ಳಿಯಲ್ಲಿ 5.2 ಸೆಂ.ಮೀ, ಶ್ರವಣಬೆಳಗೊಳದಲ್ಲಿ 5 ಸೆಂ.ಮೀ ಹಾಗೂ ಕೇರಳ ಗಡಿ ಭಾಗ ಕುಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 4 ಸೆಂ.ಮೀ ಮಳೆಯಾಗಿದೆ.
ಮಡಿಕೇರಿ ನಗರದಲ್ಲಿ ಎರಡೂವರೆ ಗಂಟೆ ನಿರಂತರವಾಗಿ ಮಳೆ ಸುರಿಯಿತು. ಪೊನ್ನಂಪೇಟೆ ಸೇರಿದಂತೆ ತಾಲ್ಲೂಕಿನ ಕಿರುಗೂರು, ಮತ್ತೂರು, ನಲ್ಲೂರು ಕುಂದ ಭಾಗಗಳಲ್ಲೂ ಮಳೆ ಬಿರುಸಿನಿಂದ ಸುರಿದಿದೆ.
ಹಾಸನ ಜಿಲ್ಲೆಯ ವಿವಿಧೆಡೆ ಶನಿವಾರ ಮಧ್ಯಾಹ್ನ ಉತ್ತಮ ಮಳೆಯಾಗಿದ್ದು, ಹಾಸನ ನಗರ, ಅರಸೀಕೆರೆ, ಚನ್ನರಾಯಪಟ್ಟಣ, ಸಕಲೇಶಪುರ, ಬೇಲೂರಿನಲ್ಲಿ ಶುಕ್ರವಾರ ಸಂಜೆಯೂ ಮಳೆಯಾಗಿದ್ದು, ಕೃಷಿ ಚಟುವಟಿಕೆಗೆ ಪೂರಕ ವಾತಾವರಣ ನಿರ್ಮಾಣವಾಗಿದೆ.
ಚಾಮರಾಜನಗರ ಜಿಲ್ಲಾ ಕೇಂದ್ರ, ಆಲೂರು, ಕೂಡ್ಲೂರು, ಮಾದಾಪುರ, ಹರದನಹಳ್ಳಿ, ಸಂತೇಮರಹಳ್ಳಿ ಹೋಬಳಿ, ಯಳಂದೂರು ತಾಲ್ಲೂಕು ಹಾಗೂ ಮೈಸೂರು ಸುತ್ತಮುತ್ತ ಸಾಧಾರಣ ಮಳೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.