ADVERTISEMENT

ಕೊಡಗು | ಸುರಿಯುತ್ತಿರುವ ಭಾರಿ ಮಳೆ: ಜನ ಜೀವನ ಅಸ್ತವ್ಯಸ್ತ

​ಪ್ರಜಾವಾಣಿ ವಾರ್ತೆ
Published 17 ಜುಲೈ 2024, 4:06 IST
Last Updated 17 ಜುಲೈ 2024, 4:06 IST
<div class="paragraphs"><p>ವಿರಾಜಪೇಟೆ- ಗೋಣಿಕೊಪ್ಪಲು ರಸ್ತೆಯ ಹಾತೂರು ಬಳಿ ಬಿದ್ದಿದ್ದ ಮರ</p></div>

ವಿರಾಜಪೇಟೆ- ಗೋಣಿಕೊಪ್ಪಲು ರಸ್ತೆಯ ಹಾತೂರು ಬಳಿ ಬಿದ್ದಿದ್ದ ಮರ

   

ಮಡಿಕೇರಿ: ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಮಂಗಳವಾರ ರಾತ್ರಿ ಇಡೀ ನಿರಂತರವಾಗಿ ಬಿರುಸಿನಿಂದ ಮಳೆ ಸುರಿದಿದೆ. ತೀವ್ರಗತಿಯ ಗಾಳಿಯೂ ಬೀಸಿದೆ. ಬುಧವಾರ ಬೆಳಿಗ್ಗೆ ಗಾಳಿ, ಮಳೆ ಮುಂದುವರಿದಿದೆ.

ಇದರಿಂದ ಜಿಲ್ಲೆಯ ಅಲ್ಲಲ್ಲಿ ಮರಗಳು, ವಿದ್ಯುತ್ ಕಂಬಗಳು ನೆಲಕಚ್ಚಿವೆ.

ADVERTISEMENT

ವಿರಾಜಪೇಟೆ- ಗೋಣಿಕೊಪ್ಪಲು ಮುಖ್ಯರಸ್ತೆಯ ಹಾತೂರು ಬಳಿ ಬೃಹತ್ ಗಾತ್ರದ ಮರವೊಂದು ರಸ್ತೆಗೆ ಬಿದ್ದು ಸಂಚಾರ ಸ್ಥಗಿತಗೊಂಡಿತ್ತು. ಸದ್ಯ ಮರವನ್ನು ತೆರವುಗೊಳಿಸಲಾಗಿದೆ.

ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಕಾನೂರು- ಕುಟ್ಟ ಮುಖ್ಯ ರಸ್ತೆಯಲ್ಲಿ ಮರಗಳು ಬಿದ್ದು ರಸ್ತೆ ಸಂಚಾರಕ್ಕೆ ವ್ಯತ್ಯಯ ಉಂಟಾಗಿತ್ತು, ಗೋಣಿಕೊಪ್ಪಲು ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಮರ ತೆರವುಗೊಳಿಸಿದರು.

ಭಾಗಮಂಡಲದಲ್ಲಿ ಕನ್ನಿಕಾ ನದಿ ಭಾರಿ ಪ್ರಮಾಣದಲ್ಲಿ ಹರಿಯುತ್ತಿದೆ. ಕಾವೇರಿ ನದಿಯಲ್ಲೂ ನೀರಿನ ಮಟ್ಟ ಏರಿಕೆಯಾಗಿದೆ. ಭಾಗಮಂಡಲ - ನಾಪೋಕ್ಲು ರಸ್ತೆಯಲ್ಲಿ ಎರಡೂವರೆ ಅಡಿಗಳಷ್ಟು ನೀರು ಹರಿಯುತ್ತಿದೆ. ಭಾಗಮಂಡಲ- ಮಡಿಕೇರಿ ರಸ್ತೆಗೂ ನೀರು ಬರಲಾರಂಭಿಸಿದೆ.

ಮಡಿಕೇರಿ ನಗರದಲ್ಲಿ ದಟ್ಟ ಮಂಜು ಕವಿದಿದ್ದು, ಜೋರು ಗಾಳಿಯ ಜೊತೆ ಮಳೆ ಸುರಿಯುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.