ADVERTISEMENT

ಮಡಿಕೇರಿಯಲ್ಲಿ ಭಾರಿ ಮಳೆ: ವಿದ್ಯುತ್ ಪೂರೈಕೆ ಸ್ಥಗಿತ

​ಪ್ರಜಾವಾಣಿ ವಾರ್ತೆ
Published 19 ಜುಲೈ 2024, 5:29 IST
Last Updated 19 ಜುಲೈ 2024, 5:29 IST
<div class="paragraphs"><p>ಕುಶಾಲನಗರದಲ್ಲಿ ಸಾಯಿಬಡಾವಣೆಯ ನಂತರ ಇದೀಗ ಇಂದಿರಾ ನಗರಕ್ಕೂ ನದಿ ನೀರು ವ್ಯಾಪಿಸುತ್ತಿದೆ</p></div>

ಕುಶಾಲನಗರದಲ್ಲಿ ಸಾಯಿಬಡಾವಣೆಯ ನಂತರ ಇದೀಗ ಇಂದಿರಾ ನಗರಕ್ಕೂ ನದಿ ನೀರು ವ್ಯಾಪಿಸುತ್ತಿದೆ

   

ಮಡಿಕೇರಿ: ನಗರದಲ್ಲಿ ಸುಮಾರು ಒಂದೂವರೆ ಗಂಟೆಯಿಂದ ಭಾರಿ ಸ್ವರೂಪದಲ್ಲಿ ಮಳೆ ಸುರಿಯುತ್ತಿದ್ದು ಜೋರು ಗಾಳಿ ಬೀಸುತ್ತಿದೆ. ಮರಗಳು ವಿದ್ಯುತ್ ಕಂಬಗಳು ಮುರಿದು ಬೀಳುತ್ತಿವೆ. ನಗರಾದ್ಯಂತ ವಿದ್ಯುತ್ ಪೂರೈಕೆಯನ್ನು ಸ್ಥಗಿತಗೊಳಿಸಲಾಗಿದೆ.

ಜಿಲ್ಲೆಯಲ್ಲಿ‌ ಪ್ರವಾಹ ಪರಿಸ್ಥಿತಿ ಮತ್ತೂ ಹೆಚ್ಚಾಗುತ್ತಿದೆ. ಕುಶಾಲನಗರದಲ್ಲಿ ಈಗ ಇಂದಿರಾ ನಗರಕ್ಕೂ ನೀರು ನುಗ್ಗಿದೆ. ಮಡಿಕೇರಿ- ವಿರಾಜಪೇಟೆ ಸಂಪರ್ಕ ಬೆಸೆಯುವ ಭೇತ್ರಿಯಲ್ಲಿ ಕಾವೇರಿ ಹೊಳೆ ಸೇತುವೆಯ ಮಟ್ಟಕ್ಕೆ ತಲುಪಿದೆ. ನಾಪೋಕ್ಲು ವ್ಯಾಪ್ತಿಯಲ್ಲೂ ನದಿಗಳಲ್ಲಿ ನೀರಿನ ಮಟ್ಟ ಗಣನೀಯವಾಗಿ ಏರಿಕೆಯಾಗುತ್ತಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.