ADVERTISEMENT

ಟಿಕೆಟ್‌ ವಂಚಿತರ ಅಸಮಾಧಾನ ಸರಿಪಡಿಸಲು ನಾಯಕರು ಮುಂದಾಗಿದ್ದಾರೆ: ಸುರೇಶ್ ಕುಮಾರ್

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2024, 9:56 IST
Last Updated 14 ಮಾರ್ಚ್ 2024, 9:56 IST
ಎಸ್‌. ಸುರೇಶ್ ಕುಮಾರ್‌
ಎಸ್‌. ಸುರೇಶ್ ಕುಮಾರ್‌   

ಮಡಿಕೇರಿ: ಬಿಜೆಪಿಯಲ್ಲಿ ಮುಂಬರುವ ಲೋಕಸಭಾ ಚುನಾವಣೆಗೆ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿರುವುದರಿಂದ ಸಹಜವಾಗಿ ಟಿಕೆಟ್ ವಂಚಿತರು ತಮ್ಮ ನೋವನ್ನು ತೋಡಿಕೊಳ್ಳುತ್ತಾರೆ. ಅಸಮಾಧಾನವನ್ನು ಹೋಗಲಾಡಿಸಲು ಈಗಾಗಲೇ ನಮ್ಮ ನಾಯಕರು ಮುಂದಾಗಿದ್ದಾರೆ ಎಂದು ಬಿಜೆಪಿ ಶಾಸಕ ಎಸ್. ಸುರೇಶ್ ಕುಮಾರ್ ತಿಳಿಸಿದರು.

ಈಶ್ವರಪ್ಪ ಅವರಿಗೆ ಪಕ್ಷದಲ್ಲಿ ಜವಬ್ದಾರಿಯುತ ಸ್ಥಾನ ಇದೆ‌. ಅವರು ಕೂಡ ತಮ್ಮ ವೇದನೆ ಹೇಳಿಕೊಂಡಿದ್ದಾರೆ. ಅದನ್ನೂ ಕೂಡ ನಮ್ಮ ನಾಯರು ಸರಿಪಡಿಸುತ್ತಾರೆ ಎಂದು ಅವರು ಇಲ್ಲಿ ಗುರುವಾರ ಸುದ್ದಿಗಾರರಿಗೆ ತಿಳಿಸಿದರು.

ನಳಿನ್ ಕುಮಾರ್ ಕಟೀಲ್ ಹಾಗೂ ಪ್ರತಾಪ್ ಸಿಂಹ ಹೇಳಿಕೆ ನಮಗೆ ಖುಷಿ ಕೊಟ್ಟಿದೆ.

ADVERTISEMENT

ಮೂರನೇ ಬಾರಿಗೆ ಕಮಲ‌ ಅರಳಬೇಕು, ನರೇಂದ್ರ ಮೋದಿ ಪ್ರಧಾನಿಯಾಗಬೇಕೆಂಬ ಗುರಿ ನಮ್ಮದು ಎಂದು ಅವರು ಹೇಳಿದರು.

ಬಿಜೆಪಿಯಲ್ಲಿ ಒಕ್ಕಲಿಗರಿಗೆ ಸ್ಥಾನ ಇಲ್ಲ ಎಂದು ಕೆಲವರು ಆರೋಪ ಮಾಡುತ್ತಾರೆ. ಆದರೆ ಅದು ಸುಳ್ಳು. ಬಿಜೆಪಿ ಬಗ್ಗೆ ಆರೋಪ ಮಾಡುವ ದೊಡ್ಡದೊಂದು ಫ್ಯಾಕ್ಟರಿಯೇ ಇದೆ‌. ಅದರ ಕೆಲಸ ಕೇವಲ ಹುಸಿ ಆರೋಪಗಳನ್ನು ಮಾಡುವುದಾಗಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.